<p><strong>ಮುಂಡಗೋಡ: </strong>ಕೆಲವು ದಿನಗಳಿಂದ ಸುರಿದ ಮಳೆಯು ಬಿತ್ತನೆಗೆ ಹದ ಮಾಡಿಕೊಟ್ಟಿದೆ. ವರ್ಷದ ದುಡಿಮೆ ಆರಂಭಕ್ಕೆ, ಅನ್ನದಾತ ಈಗಾಗಲೇ ಚಾಲನೆ ನೀಡಿದ್ದಾರೆ. ಹೊಲಗದ್ದೆಗಳನ್ನು ಹಸನು ಮಾಡಿ, ಕಾಳಿನ ಕಣಜ ತುಂಬಿಸಲು ಅಣಿಯಾಗಿದ್ದಾರೆ. ಆದರೆ, ರಸಗೊಬ್ಬರ ದರ ಏರಿಕೆಯಾಗಿದ್ದು, ರೈತರಿಗೆ ಹೊರೆಯಾಗಿದೆ.</p>.<p>‘ಡಿ.ಎ.ಪಿ. ಗೊಬ್ಬರವು ಈ ಸಲಕೈ ಸುಡುತ್ತಿದೆ. ಕಳೆದ ವರ್ಷ ಪ್ರತಿ ಚೀಲಕ್ಕೆ ₹1,200 ರೂಪಾಯಿ ಇದ್ದ ದರವು, ಈ ಸಲ ₹1,900ಕ್ಕೆ ಏರಿಕೆಯಾಗಿದೆ. 1026 ಮಾದರಿಯ ಗೊಬ್ಬರವೂ ಪ್ರತಿ ಚೀಲದ ಮೇಲೆ ₹625ಯಷ್ಟು ಹೆಚ್ಚಳವಾಗಿದೆ. ವರ್ಷದಿಂದ ವರ್ಷಕ್ಕೆ ಬೀಜ, ಗೊಬ್ಬರ ಬೆಲೆ ಏರುತ್ತಿದೆ. ಆದರೆ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ’ ಎಂದು ರೈತ ಬಾಬಣ್ಣ ವಾಲ್ಮೀಕಿ ಹೇಳಿದರು.</p>.<p>ತಾಲ್ಲೂಕಿನಲ್ಲಿ 13,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೆಲಸ ನಡೆಯುತ್ತದೆ. ಇದಲ್ಲದೇ 6 ಸಾವಿರದಿಂದ 8 ಸಾವಿರ ಹೆಕ್ಟೇರ್ ಅರಣ್ಯ ಅತಿಕ್ರಮಣ ಭೂಮಿಯಲ್ಲಿಯೂ ರೈತರು ಕೃಷಿ ಕೆಲಸ ಮಾಡುತ್ತಾರೆ. ಮಳೆ ತುಸು ಬಿಡುವು ನೀಡಿದರೆ, ಬಿತ್ತನೆ ಕಾರ್ಯ ಭರದಿಂದ ಸಾಗಲಿದೆ ಎಂದು ರೈತರು ಹೇಳುತ್ತಾರೆ.</p>.<p><strong>ಬೀಜ, ಗೊಬ್ಬರ ಖರೀದಿ: </strong>ಇಲ್ಲಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಭತ್ತ ಹಾಗೂ ಗೋವಿನಜೋಳದ ವಿವಿಧ ತಳಿಗಳ ಮಾಹಿತಿ, ದರವನ್ನು ರೈತರು ಪಡೆಯುತ್ತಿದ್ದಾರೆ. ವಾರದ ಮುಂಚೆ ಗದ್ದೆ ಹಸನು ಮಾಡಿಕೊಂಡಿರುವ ರೈತರಿಗೆ, ಬಿತ್ತನೆಗೆ ತುರ್ತಾಗಿ ಬೀಜ ಬೇಕಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ: </strong>ಕೆಲವು ದಿನಗಳಿಂದ ಸುರಿದ ಮಳೆಯು ಬಿತ್ತನೆಗೆ ಹದ ಮಾಡಿಕೊಟ್ಟಿದೆ. ವರ್ಷದ ದುಡಿಮೆ ಆರಂಭಕ್ಕೆ, ಅನ್ನದಾತ ಈಗಾಗಲೇ ಚಾಲನೆ ನೀಡಿದ್ದಾರೆ. ಹೊಲಗದ್ದೆಗಳನ್ನು ಹಸನು ಮಾಡಿ, ಕಾಳಿನ ಕಣಜ ತುಂಬಿಸಲು ಅಣಿಯಾಗಿದ್ದಾರೆ. ಆದರೆ, ರಸಗೊಬ್ಬರ ದರ ಏರಿಕೆಯಾಗಿದ್ದು, ರೈತರಿಗೆ ಹೊರೆಯಾಗಿದೆ.</p>.<p>‘ಡಿ.ಎ.ಪಿ. ಗೊಬ್ಬರವು ಈ ಸಲಕೈ ಸುಡುತ್ತಿದೆ. ಕಳೆದ ವರ್ಷ ಪ್ರತಿ ಚೀಲಕ್ಕೆ ₹1,200 ರೂಪಾಯಿ ಇದ್ದ ದರವು, ಈ ಸಲ ₹1,900ಕ್ಕೆ ಏರಿಕೆಯಾಗಿದೆ. 1026 ಮಾದರಿಯ ಗೊಬ್ಬರವೂ ಪ್ರತಿ ಚೀಲದ ಮೇಲೆ ₹625ಯಷ್ಟು ಹೆಚ್ಚಳವಾಗಿದೆ. ವರ್ಷದಿಂದ ವರ್ಷಕ್ಕೆ ಬೀಜ, ಗೊಬ್ಬರ ಬೆಲೆ ಏರುತ್ತಿದೆ. ಆದರೆ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ’ ಎಂದು ರೈತ ಬಾಬಣ್ಣ ವಾಲ್ಮೀಕಿ ಹೇಳಿದರು.</p>.<p>ತಾಲ್ಲೂಕಿನಲ್ಲಿ 13,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೆಲಸ ನಡೆಯುತ್ತದೆ. ಇದಲ್ಲದೇ 6 ಸಾವಿರದಿಂದ 8 ಸಾವಿರ ಹೆಕ್ಟೇರ್ ಅರಣ್ಯ ಅತಿಕ್ರಮಣ ಭೂಮಿಯಲ್ಲಿಯೂ ರೈತರು ಕೃಷಿ ಕೆಲಸ ಮಾಡುತ್ತಾರೆ. ಮಳೆ ತುಸು ಬಿಡುವು ನೀಡಿದರೆ, ಬಿತ್ತನೆ ಕಾರ್ಯ ಭರದಿಂದ ಸಾಗಲಿದೆ ಎಂದು ರೈತರು ಹೇಳುತ್ತಾರೆ.</p>.<p><strong>ಬೀಜ, ಗೊಬ್ಬರ ಖರೀದಿ: </strong>ಇಲ್ಲಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಭತ್ತ ಹಾಗೂ ಗೋವಿನಜೋಳದ ವಿವಿಧ ತಳಿಗಳ ಮಾಹಿತಿ, ದರವನ್ನು ರೈತರು ಪಡೆಯುತ್ತಿದ್ದಾರೆ. ವಾರದ ಮುಂಚೆ ಗದ್ದೆ ಹಸನು ಮಾಡಿಕೊಂಡಿರುವ ರೈತರಿಗೆ, ಬಿತ್ತನೆಗೆ ತುರ್ತಾಗಿ ಬೀಜ ಬೇಕಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>