<p><strong>ಮುಂಡಗೋಡ:</strong> ಟಿಬೆಟನ್ ಧರ್ಮಗುರು ದಲೈಲಾಮಾ ಕ್ಯಾಂಪ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ, ಕೆಲವು ಪೂರ್ವನಿಗದಿತ ಪೂಜಾ ಕಾರ್ಯಕ್ರಮಗಳು ರದ್ದಾಗಿರುವುದುಬಿಕ್ಕುಗಳಿಗೆನಿರಾಸೆ ಮೂಡಿಸಿದೆ. ಧಾರ್ಮಿಕ ಪರಿಕರ, ಉಣ್ಣೆಬಟ್ಟೆ ವ್ಯಾಪಾರಸ್ಥರ ಮೇಲೂ ಇದು ಪರಿಣಾಮ ಬೀರಿದೆ.</p>.<p>ಲಾಮಾ ಕ್ಯಾಂಪ್ ನಂ.2ರ ಡ್ರೆಪುಂಗ್ ಲಾಚಿ ಬೌದ್ಧ ಮಂದಿರದಲ್ಲಿ ದಲೈಲಾಮಾ ಅವರ ಮೂರು ದಿನಗಳ ಬೋಧನೆ ಹಾಗೂ ಪೂಜಾ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಆದರೆ, ಕೊನೆಗಳಿಗೆಯಲ್ಲಿ ಕಾರ್ಯಕ್ರಮ ರದ್ದುಪಡಿಸಲಾಗಿದೆ.ಕೊನೆಯ ಹಂತದ ಸಿದ್ಧತೆಯಲ್ಲಿದ್ದ ಬೌದ್ಧ ಮುಖಂಡರು,ತಮ್ಮ ಧರ್ಮಗುರುವಿನ ಬೋಧನೆಕೇಳುವ ಅವಕಾಶ ವಂಚಿತರಾಗಬೇಕಾಯಿತು ಎಂದು ತಿಳಿದುಬಂದಿದೆ.</p>.<p>‘ದಲೈಲಾಮಾ ಕಾರ್ಯಕ್ರಮದಲ್ಲಿ ಅಮೆರಿಕ, ಭೂತಾನ್, ನೇಪಾಳ, ಕೊರಿಯಾ, ಮಂಗೋಲಿಯಾ, ಜಪಾನ್ ಸೇರಿದಂತೆ ವಿವಿಧ ದೇಶಗಳಿಂದ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಈ ಸಲ ವಿದೇಶಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ದಲೈಲಾಮಾ ಅವರ ಪೂಜಾ ಕಾರ್ಯಕ್ರಮ ರದ್ದಾಗಿರುವುದೇವಿದೇಶಿಗರ ಸಂಖ್ಯೆ ಕಡಿಮೆ ಆಗಲು ಕಾರಣ ಆಗಿದೆ’ ಎನ್ನುತ್ತಾರೆ ಬೌದ್ಧ ಮುಖಂಡ ಕರ್ಮಾ ಯಾಂಗಡುಪ್.</p>.<p>ಡ್ರೆಪುಂಗ್ ಲಾಚಿ ಬೌದ್ಧ ಮಂದಿರದ ಸುತ್ತಮುತ್ತ ಟಿಬೆಟನ್ರ ಕಲೆ, ಸಂಸ್ಕೃತಿ ಬಿಂಬಿಸುವ ಪರಿಕರಗಳನ್ನು ಮಾರಲು ಬಿಹಾರ, ಹಿಮಾಚಲ ಪ್ರದೇಶದಿಂದ ವ್ಯಾಪಾರಸ್ಥರು ಬಂದಿದ್ದಾರೆ. ಗ್ರಾಹಕರು ಇಲ್ಲದೇ ಅವರೂ ನಷ್ಟ ಅನುಭವಿಸುತ್ತಿದ್ದಾರೆ.</p>.<p>‘ಧ್ಯಾನ ಮಾಡಲು ಬೇಕಾಗಿರುವ ಜಪಮಾಲೆಗಳು, ಬುದ್ಧನ ಸಣ್ಣ ಮೂರ್ತಿಗಳು, ಶಂಖ ಸೇರಿದಂತೆ ಬಿಕ್ಕುಗಳ ಜೀವನದಲ್ಲಿ ಹಾಸುಹೊಕ್ಕಿರುವ ಪೂಜಾ ಸಾಮಗ್ರಿಯನ್ನು ಮಾರಲು ಬಂದಿದ್ದೇವೆ. ಆದರೆ, ಹೇಳಿಕೊಳ್ಳುವಂತಹ ವ್ಯಾಪಾರ ಇಲ್ಲ’ ಎನ್ನುತ್ತಾರೆ ಬೋಧಗಯಾದಿಂದ ಬಂದಿರುವ ರಾಕೇಶ ಸಿಂಗ್.</p>.<p>‘ದಲೈಲಾಮಾ ಅವರ ಕಾರ್ಯಕ್ರಮ ಇರುವ ಕಡೆಗಳಲ್ಲಿ ಹೋಗಿ ವ್ಯಾಪಾರ ನಡೆಸುತ್ತೇವೆ. ಬೋಧಗಯಾ, ಬನಾರಸ್ದಿಂದ 25ಕ್ಕಿಂತ ಹೆಚ್ಚಿನ ಜನರು ಬಂದಿದ್ದೇವೆ. ಇಲ್ಲಿ ರಸ್ತೆ ಬದಿಯಲ್ಲಿ ಅಂಗಡಿ ತೆರೆಯಲು ಸಮಸ್ಯೆ ಇದೆ’ ಎಂದು ರಾಹುಲ್ ಹೇಳಿದರು.</p>.<p class="Subhead"><strong>ಹಲವರಿಗೆ ಸಿಗದ ‘ಪಿ.ಎ.ಪಿ’: </strong>‘ನಿರ್ಬಂಧಿತ ಪ್ರದೇಶದ ಪರವಾನಿಗೆ (ಪಿ.ಎ.ಪಿ) ಪಡೆದ ವಿದೇಶಿಗರು ಮಾತ್ರ ದಲೈಲಾಮಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಹಲವು ವಿದೇಶಿ ಅನುಯಾಯಿಗಳಿಗೆ ಈ ಸಲ ಪಿ.ಎ.ಪಿ ಸಿಗದಿರುವುದು, ಪ್ರವಾಸಿಗರು ಕಡಿಮೆ ಬರಲು ಕಾರಣವಾಗಿದೆ. ಬೋಧಗಯಾ, ಧರ್ಮಶಾಲಾ ಸೇರಿದಂತೆ ವಿವಿಧೆಡೆಪಿ.ಎ.ಪಿ ಸಮಸ್ಯೆ ಉದ್ಭವಿಸುವುದಿಲ್ಲ. ಅಲ್ಲಿ ದಲೈಲಾಮಾ ಅವರ ಬೋಧನೆ, ಪೂಜಾ ಕಾರ್ಯಕ್ರಮಗಳಲ್ಲಿ ವಿದೇಶಿ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ’ ಎಂದುಬೌದ್ಧ ಮುಖಂಡ ಕರ್ಮಾ ಯಾಂಗಡುಪ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ:</strong> ಟಿಬೆಟನ್ ಧರ್ಮಗುರು ದಲೈಲಾಮಾ ಕ್ಯಾಂಪ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ, ಕೆಲವು ಪೂರ್ವನಿಗದಿತ ಪೂಜಾ ಕಾರ್ಯಕ್ರಮಗಳು ರದ್ದಾಗಿರುವುದುಬಿಕ್ಕುಗಳಿಗೆನಿರಾಸೆ ಮೂಡಿಸಿದೆ. ಧಾರ್ಮಿಕ ಪರಿಕರ, ಉಣ್ಣೆಬಟ್ಟೆ ವ್ಯಾಪಾರಸ್ಥರ ಮೇಲೂ ಇದು ಪರಿಣಾಮ ಬೀರಿದೆ.</p>.<p>ಲಾಮಾ ಕ್ಯಾಂಪ್ ನಂ.2ರ ಡ್ರೆಪುಂಗ್ ಲಾಚಿ ಬೌದ್ಧ ಮಂದಿರದಲ್ಲಿ ದಲೈಲಾಮಾ ಅವರ ಮೂರು ದಿನಗಳ ಬೋಧನೆ ಹಾಗೂ ಪೂಜಾ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಆದರೆ, ಕೊನೆಗಳಿಗೆಯಲ್ಲಿ ಕಾರ್ಯಕ್ರಮ ರದ್ದುಪಡಿಸಲಾಗಿದೆ.ಕೊನೆಯ ಹಂತದ ಸಿದ್ಧತೆಯಲ್ಲಿದ್ದ ಬೌದ್ಧ ಮುಖಂಡರು,ತಮ್ಮ ಧರ್ಮಗುರುವಿನ ಬೋಧನೆಕೇಳುವ ಅವಕಾಶ ವಂಚಿತರಾಗಬೇಕಾಯಿತು ಎಂದು ತಿಳಿದುಬಂದಿದೆ.</p>.<p>‘ದಲೈಲಾಮಾ ಕಾರ್ಯಕ್ರಮದಲ್ಲಿ ಅಮೆರಿಕ, ಭೂತಾನ್, ನೇಪಾಳ, ಕೊರಿಯಾ, ಮಂಗೋಲಿಯಾ, ಜಪಾನ್ ಸೇರಿದಂತೆ ವಿವಿಧ ದೇಶಗಳಿಂದ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಈ ಸಲ ವಿದೇಶಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ದಲೈಲಾಮಾ ಅವರ ಪೂಜಾ ಕಾರ್ಯಕ್ರಮ ರದ್ದಾಗಿರುವುದೇವಿದೇಶಿಗರ ಸಂಖ್ಯೆ ಕಡಿಮೆ ಆಗಲು ಕಾರಣ ಆಗಿದೆ’ ಎನ್ನುತ್ತಾರೆ ಬೌದ್ಧ ಮುಖಂಡ ಕರ್ಮಾ ಯಾಂಗಡುಪ್.</p>.<p>ಡ್ರೆಪುಂಗ್ ಲಾಚಿ ಬೌದ್ಧ ಮಂದಿರದ ಸುತ್ತಮುತ್ತ ಟಿಬೆಟನ್ರ ಕಲೆ, ಸಂಸ್ಕೃತಿ ಬಿಂಬಿಸುವ ಪರಿಕರಗಳನ್ನು ಮಾರಲು ಬಿಹಾರ, ಹಿಮಾಚಲ ಪ್ರದೇಶದಿಂದ ವ್ಯಾಪಾರಸ್ಥರು ಬಂದಿದ್ದಾರೆ. ಗ್ರಾಹಕರು ಇಲ್ಲದೇ ಅವರೂ ನಷ್ಟ ಅನುಭವಿಸುತ್ತಿದ್ದಾರೆ.</p>.<p>‘ಧ್ಯಾನ ಮಾಡಲು ಬೇಕಾಗಿರುವ ಜಪಮಾಲೆಗಳು, ಬುದ್ಧನ ಸಣ್ಣ ಮೂರ್ತಿಗಳು, ಶಂಖ ಸೇರಿದಂತೆ ಬಿಕ್ಕುಗಳ ಜೀವನದಲ್ಲಿ ಹಾಸುಹೊಕ್ಕಿರುವ ಪೂಜಾ ಸಾಮಗ್ರಿಯನ್ನು ಮಾರಲು ಬಂದಿದ್ದೇವೆ. ಆದರೆ, ಹೇಳಿಕೊಳ್ಳುವಂತಹ ವ್ಯಾಪಾರ ಇಲ್ಲ’ ಎನ್ನುತ್ತಾರೆ ಬೋಧಗಯಾದಿಂದ ಬಂದಿರುವ ರಾಕೇಶ ಸಿಂಗ್.</p>.<p>‘ದಲೈಲಾಮಾ ಅವರ ಕಾರ್ಯಕ್ರಮ ಇರುವ ಕಡೆಗಳಲ್ಲಿ ಹೋಗಿ ವ್ಯಾಪಾರ ನಡೆಸುತ್ತೇವೆ. ಬೋಧಗಯಾ, ಬನಾರಸ್ದಿಂದ 25ಕ್ಕಿಂತ ಹೆಚ್ಚಿನ ಜನರು ಬಂದಿದ್ದೇವೆ. ಇಲ್ಲಿ ರಸ್ತೆ ಬದಿಯಲ್ಲಿ ಅಂಗಡಿ ತೆರೆಯಲು ಸಮಸ್ಯೆ ಇದೆ’ ಎಂದು ರಾಹುಲ್ ಹೇಳಿದರು.</p>.<p class="Subhead"><strong>ಹಲವರಿಗೆ ಸಿಗದ ‘ಪಿ.ಎ.ಪಿ’: </strong>‘ನಿರ್ಬಂಧಿತ ಪ್ರದೇಶದ ಪರವಾನಿಗೆ (ಪಿ.ಎ.ಪಿ) ಪಡೆದ ವಿದೇಶಿಗರು ಮಾತ್ರ ದಲೈಲಾಮಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಹಲವು ವಿದೇಶಿ ಅನುಯಾಯಿಗಳಿಗೆ ಈ ಸಲ ಪಿ.ಎ.ಪಿ ಸಿಗದಿರುವುದು, ಪ್ರವಾಸಿಗರು ಕಡಿಮೆ ಬರಲು ಕಾರಣವಾಗಿದೆ. ಬೋಧಗಯಾ, ಧರ್ಮಶಾಲಾ ಸೇರಿದಂತೆ ವಿವಿಧೆಡೆಪಿ.ಎ.ಪಿ ಸಮಸ್ಯೆ ಉದ್ಭವಿಸುವುದಿಲ್ಲ. ಅಲ್ಲಿ ದಲೈಲಾಮಾ ಅವರ ಬೋಧನೆ, ಪೂಜಾ ಕಾರ್ಯಕ್ರಮಗಳಲ್ಲಿ ವಿದೇಶಿ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ’ ಎಂದುಬೌದ್ಧ ಮುಖಂಡ ಕರ್ಮಾ ಯಾಂಗಡುಪ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>