<p><strong>ಕಾರವಾರ:</strong> ಮಳೆಗಾಲದ ಮಧ್ಯಭಾಗ ಬರುತ್ತಿದ್ದಂತೆ ಜಿಲ್ಲೆಯಲ್ಲಿ ದೇಸಿ ತರಕಾರಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ವ್ಯಾಪಾರಕ್ಕೆ ಕುಳಿತ ಮಹಿಳೆಯರ ಬಳಿ ಕಾಡಿನ ಅಣಬೆ, ಎಳೆ ಬಿದಿರು, ಅಮಟೆಕಾಯಿ, ಬೇರಲಸು ಮುಂತಾದ ತರಹೇವಾರಿ ತರಕಾರಿಗಳು ಆಕರ್ಷಿಸುತ್ತವೆ.</p>.<p>ದಟ್ಟವಾದ, ಬಿಸಿಲು ಹೆಚ್ಚಾಗಿ ಬೀಳದ ಅರಣ್ಯ ಪ್ರದೇಶದಲ್ಲಿ ತನ್ನಿಂತಾನೇ ಬೆಳೆಯುವ ಕಾಡು ಅಣಬೆಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಅವುಗಳನ್ನು ಕಷ್ಟಪಟ್ಟು ಸಂಗ್ರಹಿಸಿ ತಂದು ಮಾರಾಟ ಮಾಡುವುದು ಮಹಿಳೆಯರಿಗೆ ಒಂದಷ್ಟು ಆದಾಯವನ್ನೂ ತಂದುಕೊಡುತ್ತದೆ.</p>.<p>ಅಣಬೆಯ ಗಾತ್ರಕ್ಕೆ ಅನುಗುಣವಾಗಿ ದರ ನಿಗದಿ ಮಾಡಲಾಗುತ್ತದೆ. ಭರಪೂರ ಪೌಷ್ಟಿಕಾಂಶಗಳಿಂದ ಕೂಡಿರುವ ಈ ಅಣಬೆಯ ಪದಾರ್ಥ ಬಹಳ ರುಚಿಕರವಾಗಿರುತ್ತದೆ ಎನ್ನುತ್ತಾರೆ ನಗರದ ರಮೇಶ ನಾಯ್ಕ.</p>.<p>100 ಅಣಬೆಗಳಿರುವ ಒಂದು ಪೊಟ್ಟಣಕ್ಕೆ ₹ 400ರಿಂದ ₹ 800ರವರೆಗೂ ದರವಿದೆ. ಅವು ಹುಟ್ಟಿ ಒಂದೆರಡು ದಿನಗಳಲ್ಲಿ ಹಾಳಾಗುತ್ತವೆ. ಅವುಗಳನ್ನು ಹುಡುಕಿ ತರುವುದೇ ದೊಡ್ಡ ಕೆಲಸ ಎನ್ನುತ್ತಾರೆ ಬೀದಿ ಬದಿ ವ್ಯಾಪಾರಿ ಸುವರ್ಣಾ ಶಂಕರ ನಾಯ್ಕ.</p>.<p>ಋತುಮಾನಕ್ಕೆ ಅನುಗುಣವಾಗಿ ಸಿಗುವ ತರಕಾರಿಗಳನ್ನು ಇಷ್ಟಪಡುವವರ ನಾಲಿಗೆ ರುಚಿ ತಣಿಸುವ ಎಳೆಯ ಬಿದಿರಿನ ಮೆಳೆಗಳೂ ವಿವಿಧೆಡೆ ಮಾರಾಟಕ್ಕೆ ಇಡಲಾಗಿದೆ. ಬಿದಿರಿನ ಹಿಂಡಿನಿಂದ ಅವುಗಳನ್ನು ಮುರಿದು ತರುವುದು ಕೂಡ ಕಷ್ಟದ ಕೆಲಸ ಎನ್ನುತ್ತಾರೆ ಅವರು.</p>.<p>‘ಈ ಬಾರಿ ಬಿದಿರಿನ ಒಂದು ಮೆಳೆಯನ್ನು ₹ 125ರಿಂದ ₹ 150ರಂತೆ ಮಾರಾಟ ಮಾಡಲಾಗುತ್ತಿದೆ. ಪಲ್ಯ, ಸಾಂಬಾರು ಸಿದ್ಧಪಡಿಸಲು ಇದಕ್ಕೆ ಭಾರಿ ಬೇಡಿಕೆಯಿದೆ. ಇದರ ಉಪ್ಪಿನಕಾಯಿ ತಯಾರಿಸುವವರು ಗಜಲಿಂಬೆ ಕಾಯಿಯನ್ನೂ ಮಿಶ್ರಣ ಮಾಡುತ್ತಾರೆ. ಅದೂ ಮಾರುಕಟ್ಟೆಯಲ್ಲಿದ್ದು ಒಂದಕ್ಕೆ ₹ 50ರಂತೆ ಮಾರಾಟವಾಗುತ್ತಿದೆ’ ಎಂದರು.</p>.<p>ಇದೇ ರೀತಿ ವಿವಿಧ ರೀತಿಯ ಸಾರು, ಸಾಂಬಾರು, ಗೊಜ್ಜುಗಳಿಗೆ ಮಿಶ್ರಣ ಮಾಡಲು ಬಳಸುವ ಅಮಟೆಕಾಯಿಯೂ ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿವೆ. ಉಳಿದಂತೆ, ಪಲ್ಯ, ಸಾಂಬಾರು, ಬಜ್ಜಿ, ಚಿಪ್ಸ್ಗೆ ಪ್ರಸಿದ್ಧವಾಗಿರುವ ಬೇರಲಸು ದೊಡ್ಡ ಗಾತ್ರದ್ದು ₹ 100ಕ್ಕೆ ಒಂದರಂತೆ ಮಾರಾಟವಾಗುತ್ತಿದೆ.</p>.<p>‘ಈ ಬಾರಿ ಕಳೆದ ವರ್ಷಕ್ಕಿಂತ ದರ ಸ್ವಲ್ಪ ಹೆಚ್ಚಿದೆ. ಆದರೆ, ಇವೆಲ್ಲ ಮಳೆಗಾಲದಲ್ಲಿ ಮಾತ್ರ ಸಿಗುವ ತರಕಾರಿ ಎಂಬ ಕಾರಣಕ್ಕೆ ಖರೀದಿಸಿ ಅಡುಗೆ ಮಾಡಿ ಸೇವಿಸಿ ಸಂಭ್ರಮಿಸುತ್ತೇವೆ’ ಎನ್ನುತ್ತಾರೆ ಗ್ರಾಹಕಿ ಸಂಯುಕ್ತಾ ರಾವ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಮಳೆಗಾಲದ ಮಧ್ಯಭಾಗ ಬರುತ್ತಿದ್ದಂತೆ ಜಿಲ್ಲೆಯಲ್ಲಿ ದೇಸಿ ತರಕಾರಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ವ್ಯಾಪಾರಕ್ಕೆ ಕುಳಿತ ಮಹಿಳೆಯರ ಬಳಿ ಕಾಡಿನ ಅಣಬೆ, ಎಳೆ ಬಿದಿರು, ಅಮಟೆಕಾಯಿ, ಬೇರಲಸು ಮುಂತಾದ ತರಹೇವಾರಿ ತರಕಾರಿಗಳು ಆಕರ್ಷಿಸುತ್ತವೆ.</p>.<p>ದಟ್ಟವಾದ, ಬಿಸಿಲು ಹೆಚ್ಚಾಗಿ ಬೀಳದ ಅರಣ್ಯ ಪ್ರದೇಶದಲ್ಲಿ ತನ್ನಿಂತಾನೇ ಬೆಳೆಯುವ ಕಾಡು ಅಣಬೆಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಅವುಗಳನ್ನು ಕಷ್ಟಪಟ್ಟು ಸಂಗ್ರಹಿಸಿ ತಂದು ಮಾರಾಟ ಮಾಡುವುದು ಮಹಿಳೆಯರಿಗೆ ಒಂದಷ್ಟು ಆದಾಯವನ್ನೂ ತಂದುಕೊಡುತ್ತದೆ.</p>.<p>ಅಣಬೆಯ ಗಾತ್ರಕ್ಕೆ ಅನುಗುಣವಾಗಿ ದರ ನಿಗದಿ ಮಾಡಲಾಗುತ್ತದೆ. ಭರಪೂರ ಪೌಷ್ಟಿಕಾಂಶಗಳಿಂದ ಕೂಡಿರುವ ಈ ಅಣಬೆಯ ಪದಾರ್ಥ ಬಹಳ ರುಚಿಕರವಾಗಿರುತ್ತದೆ ಎನ್ನುತ್ತಾರೆ ನಗರದ ರಮೇಶ ನಾಯ್ಕ.</p>.<p>100 ಅಣಬೆಗಳಿರುವ ಒಂದು ಪೊಟ್ಟಣಕ್ಕೆ ₹ 400ರಿಂದ ₹ 800ರವರೆಗೂ ದರವಿದೆ. ಅವು ಹುಟ್ಟಿ ಒಂದೆರಡು ದಿನಗಳಲ್ಲಿ ಹಾಳಾಗುತ್ತವೆ. ಅವುಗಳನ್ನು ಹುಡುಕಿ ತರುವುದೇ ದೊಡ್ಡ ಕೆಲಸ ಎನ್ನುತ್ತಾರೆ ಬೀದಿ ಬದಿ ವ್ಯಾಪಾರಿ ಸುವರ್ಣಾ ಶಂಕರ ನಾಯ್ಕ.</p>.<p>ಋತುಮಾನಕ್ಕೆ ಅನುಗುಣವಾಗಿ ಸಿಗುವ ತರಕಾರಿಗಳನ್ನು ಇಷ್ಟಪಡುವವರ ನಾಲಿಗೆ ರುಚಿ ತಣಿಸುವ ಎಳೆಯ ಬಿದಿರಿನ ಮೆಳೆಗಳೂ ವಿವಿಧೆಡೆ ಮಾರಾಟಕ್ಕೆ ಇಡಲಾಗಿದೆ. ಬಿದಿರಿನ ಹಿಂಡಿನಿಂದ ಅವುಗಳನ್ನು ಮುರಿದು ತರುವುದು ಕೂಡ ಕಷ್ಟದ ಕೆಲಸ ಎನ್ನುತ್ತಾರೆ ಅವರು.</p>.<p>‘ಈ ಬಾರಿ ಬಿದಿರಿನ ಒಂದು ಮೆಳೆಯನ್ನು ₹ 125ರಿಂದ ₹ 150ರಂತೆ ಮಾರಾಟ ಮಾಡಲಾಗುತ್ತಿದೆ. ಪಲ್ಯ, ಸಾಂಬಾರು ಸಿದ್ಧಪಡಿಸಲು ಇದಕ್ಕೆ ಭಾರಿ ಬೇಡಿಕೆಯಿದೆ. ಇದರ ಉಪ್ಪಿನಕಾಯಿ ತಯಾರಿಸುವವರು ಗಜಲಿಂಬೆ ಕಾಯಿಯನ್ನೂ ಮಿಶ್ರಣ ಮಾಡುತ್ತಾರೆ. ಅದೂ ಮಾರುಕಟ್ಟೆಯಲ್ಲಿದ್ದು ಒಂದಕ್ಕೆ ₹ 50ರಂತೆ ಮಾರಾಟವಾಗುತ್ತಿದೆ’ ಎಂದರು.</p>.<p>ಇದೇ ರೀತಿ ವಿವಿಧ ರೀತಿಯ ಸಾರು, ಸಾಂಬಾರು, ಗೊಜ್ಜುಗಳಿಗೆ ಮಿಶ್ರಣ ಮಾಡಲು ಬಳಸುವ ಅಮಟೆಕಾಯಿಯೂ ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿವೆ. ಉಳಿದಂತೆ, ಪಲ್ಯ, ಸಾಂಬಾರು, ಬಜ್ಜಿ, ಚಿಪ್ಸ್ಗೆ ಪ್ರಸಿದ್ಧವಾಗಿರುವ ಬೇರಲಸು ದೊಡ್ಡ ಗಾತ್ರದ್ದು ₹ 100ಕ್ಕೆ ಒಂದರಂತೆ ಮಾರಾಟವಾಗುತ್ತಿದೆ.</p>.<p>‘ಈ ಬಾರಿ ಕಳೆದ ವರ್ಷಕ್ಕಿಂತ ದರ ಸ್ವಲ್ಪ ಹೆಚ್ಚಿದೆ. ಆದರೆ, ಇವೆಲ್ಲ ಮಳೆಗಾಲದಲ್ಲಿ ಮಾತ್ರ ಸಿಗುವ ತರಕಾರಿ ಎಂಬ ಕಾರಣಕ್ಕೆ ಖರೀದಿಸಿ ಅಡುಗೆ ಮಾಡಿ ಸೇವಿಸಿ ಸಂಭ್ರಮಿಸುತ್ತೇವೆ’ ಎನ್ನುತ್ತಾರೆ ಗ್ರಾಹಕಿ ಸಂಯುಕ್ತಾ ರಾವ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>