ಶಿಗ್ಗಾಂವದ ಭಾಷಾ ಸಾಬ್ ಬಂಧಿತ ಆರೋಪಿ. ಡಿಎಸ್ಪಿ ಜಿ.ಟಿ.ನಾಯಕ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಸಿಪಿಐ ಪ್ರದೀಪ ಹಾಗೂ ನಗರ ಠಾಣೆಯ ಪಿಎಸ್ಐ ಶಿವಾನಂದ ಅವರು, ನಗರದ ಸಿದ್ದಾಪುರ ರಸ್ತೆ ಬಳಿ ಆರೋಪಿಯನ್ನು ಬಂಧಿಸಿದ್ದಾರೆ. ‘ಆರೋಪಿ ಬಳಿ ಗಾಂಜಾ ಖರೀದಿಸಲು, ಬಂದಿದ್ದ ಸುಮಾರು 15 ಯುವಕರು ತಪ್ಪಿಸಿಕೊಂಡಿದ್ದಾರೆ. ಅವರ ಹುಡುಕಾಟ ನಡೆಸಲಾಗಿದೆ. ಆರೋಪಿ ಭಾಷಾ ಸಾಬ್ ಗಾಂಜಾವನ್ನು ಬೆಳಗಾವಿಯಿಂದ ತಂದು, ಮಾರಾಟ ಮಾಡುತ್ತಿದ್ದ. ದಲ್ಲಾಳಿಯನ್ನು ಹಿಡಿಯಲು ಕೂಡ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.