ತಾಲ್ಲೂಕಿನ ವಿವಿಧೆಡ ಈ ಬಾರಿ ಎರಡು ಸಾವಿರ ಹೆಕ್ಟೇರ್ ಶುಂಠಿ ಬೆಳೆಯಲಾಗಿದೆ.ಬದನಗೋಡ ಭಾಗದಲ್ಲಿ ಮಳೆಯಿಂದ ಸುಮಾರು400 ಹೆಕ್ಟೇರ್ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದನಗನಹಳ್ಳಿ, ಬದನಗೋಡ, ದಾಸನಕೊಪ್ಪ, ಬೆಳ್ಳನಕೇರಿ, ಸಂತೋಳ್ಳಿ, ವದ್ದಲ, ಕಾಳಂಗಿ, ಕುಪ್ಪಗಡ್ಡೆ, ರಂಗಾಪುರದಲ್ಲಿಬೆಳೆಗೆಕೊಳೆ ರೋಗ ಬಂದಿದೆ. ಎಕರೆಯೊಂದಕ್ಕೆ ಕನಿಷ್ಠ ₹ 10 ಲಕ್ಷ ಹಾನಿಯಾಗಿದೆ ಎಂದು ಹೇಳುತ್ತಾರೆ ಕೃಷಿಕ ಉಮಾಕಾಂತ.