<p><strong>ಕಾರವಾರ: </strong>ಐದು ತಿಂಗಳ ಅಂತರದ ಬಳಿಕ ಮಂಗಳವಾರದಿಂದ ಗೋವಾ ರಾಜ್ಯವು ತನ್ನ ಗಡಿಗಳನ್ನು ಇತರ ರಾಜ್ಯಗಳ ಪ್ರಯಾಣಿಕರಿಗೆ ಮುಕ್ತವಾಗಿಸಿದೆ. ಕೊರೊನಾ ನೆಪದಲ್ಲಿ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳನ್ನು ಅಲ್ಲಿನ ಸರ್ಕಾರವು ಹಿಂಪಡೆದಿದೆ.</p>.<p>ಕರ್ನಾಟಕ– ಗೋವಾ ಗಡಿಯಲ್ಲಿರುವ ಮಾಜಾಳಿಯ ಚೆಕ್ಪೋಸ್ಟ್ನಲ್ಲಿ ಆ.31ರವರೆಗೆ ವಿವಿಧ ಷರತ್ತುಗಳನ್ನು ವಿಧಿಸಿ ಹೊರರಾಜ್ಯಗಳ ಪ್ರಯಾಣಿಕರನ್ನು ಒಳ ಬಿಡಲಾಗುತ್ತಿತ್ತು. ಕೇಂದ್ರ ಸರ್ಕಾರವು ಅಂತರರಾಜ್ಯ ಗಡಿಗಳನ್ನು ಮುಕ್ತವಾಗಿ ಇಡುವಂತೆ ರಾಜ್ಯಗಳಿಗೆ ಆ.22ರಂದು ಆದೇಶಿಸಿತ್ತು. ಅದರಂತೆ ಆ.24ರಿಂದ ಕರ್ನಾಟಕವು ತನ್ನೆಲ್ಲ ಅಂತರರಾಜ್ಯ ಗಡಿಗಳನ್ನೂ ಮುಕ್ತವಾಗಿಸಿತ್ತು. ಆದರೂ ಗೋವಾ ಈ ಆದೇಶವನ್ನು ಪಾಲಿಸಿರಲಿಲ್ಲ. ಇದು ಸ್ಥಳೀಯರ ಹಾಗೂ ಕಾರವಾರದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.</p>.<p>ತನ್ನ ರಾಜ್ಯದೊಳಗೆ ಬರುವವರು ಕೋವಿಡ್ 19 ನೆಗೆಟಿವ್ ತರಬೇಕು. ಇದಾಗಿದಿದ್ದರೆ 14 ದಿನ ಹೋಂ ಕ್ವಾರಂಟೈನ್ ಆಗಬೇಕು. ಒಂದುವೇಳೆ, ಈ ಎರಡೂ ಷರತ್ತುಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ ₹ 2 ಸಾವಿರ ಪಾವತಿಸಿ ಗಂಟಲುದ್ರವದ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಿತ್ತು. ಗೋವಾದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕಾರವಾರ, ಅಂಕೋಲಾ ಭಾಗದ ಜನರಿಗೆ ಈ ನಿಯಮದಿಂದಾಗಿ ಭಾರಿ ತೊಂದರೆಯಾಯಿತು.</p>.<p>ತನ್ನ ನಿಯಮಗಳನ್ನು ಹಿಂಪಡೆದು ಮುಕ್ತ ಸಂಚಾರಕ್ಕೆ ಅವಕಾಶ ನೀಡುವಂತೆ ವಿವಿಧ ಸಂಘಟನೆಗಳೂ ಗೋವಾ ಸರ್ಕಾರವನ್ನು ಆಗ್ರಹಿಸಿದ್ದರು. ಮಾಜಾಳಿಯಲ್ಲಿ ಆ.29ರಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆಯನ್ನೂ ನಡೆಸಿದ್ದರು.</p>.<p>ಈ ನಡುವೆ, ಶಾಸಕಿ ರೂಪಾಲಿ ನಾಯ್ಕ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಮಸ್ಯೆಯನ್ನು ವಿವರಿಸಿದ್ದರು. ಇದಕ್ಕೆ ಸ್ಪಂದಿಸಿದ ಸಾವಂತ, ಕೇಂದ್ರ ಸರ್ಕಾರದ ನಿರ್ದೇಶನಂತೆ ಸೆ.1ರಿಂದ ಗೋವಾದ ಎಲ್ಲ ಗಡಿಗಳನ್ನೂ ತೆರವು ಮಾಡುವುದಾಗಿ ಭರವಸೆ ನೀಡಿದ್ದರು.</p>.<p class="Subhead"><strong>ಸಿಹಿ ಹಂಚಿ ಸಂಭ್ರಮ:</strong>ಮಾಜಾಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಗೋವಾ ಗಡಿಯಲ್ಲಿ ಸಂಚಾರ ನಿರ್ಬಂಧವನ್ನು ಸಂಪೂರ್ಣವಾಗಿ ತೆರವು ಮಾಡಿದ್ದು ಕಾರವಾರದ ಜನರ ಸಂತಸಕ್ಕೆ ಕಾರಣವಾಗಿದೆ. ಗೋವಾ ಚೆಕ್ಪೋಸ್ಟ್ಗೆ ತೆರಳಿದ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ನೇತೃತ್ವದಲ್ಲಿ, ಅಲ್ಲಿನ ಸರ್ಕಾರಿ ಸಿಬ್ಬಂದಿ, ವಾಹನ ಚಾಲಕರಿಗೆ ಸಿಹಿ ವಿತರಿಸಿದರು.</p>.<p>ಗೋವಾ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೆರವು ಮಾಡಿರುವ ಕಾರಣ ಬಸ್ ಸಂಚಾರವೂ ಹಂತಹಂತವಾಗಿ ಆರಂಭವಾಗುವ ನಿರೀಕ್ಷೆಯಿದೆ. ಕರ್ನಾಟಕದ ಗಡಿಯ ಸಮೀಪದಲ್ಲಿರುವ ಪೋಳೆಂ ಸುತ್ತಮುತ್ತ ಇರುವ ವಿವಿಧ ಅಂಗಡಿ, ಹೋಟೆಲ್, ಬಾರ್ಗಳ ಮಾಲೀಕರೂ ವ್ಯಾಪಾರ, ವಹಿವಾಟು ನಡೆಸಲು ಸಿದ್ಧತೆ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಐದು ತಿಂಗಳ ಅಂತರದ ಬಳಿಕ ಮಂಗಳವಾರದಿಂದ ಗೋವಾ ರಾಜ್ಯವು ತನ್ನ ಗಡಿಗಳನ್ನು ಇತರ ರಾಜ್ಯಗಳ ಪ್ರಯಾಣಿಕರಿಗೆ ಮುಕ್ತವಾಗಿಸಿದೆ. ಕೊರೊನಾ ನೆಪದಲ್ಲಿ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳನ್ನು ಅಲ್ಲಿನ ಸರ್ಕಾರವು ಹಿಂಪಡೆದಿದೆ.</p>.<p>ಕರ್ನಾಟಕ– ಗೋವಾ ಗಡಿಯಲ್ಲಿರುವ ಮಾಜಾಳಿಯ ಚೆಕ್ಪೋಸ್ಟ್ನಲ್ಲಿ ಆ.31ರವರೆಗೆ ವಿವಿಧ ಷರತ್ತುಗಳನ್ನು ವಿಧಿಸಿ ಹೊರರಾಜ್ಯಗಳ ಪ್ರಯಾಣಿಕರನ್ನು ಒಳ ಬಿಡಲಾಗುತ್ತಿತ್ತು. ಕೇಂದ್ರ ಸರ್ಕಾರವು ಅಂತರರಾಜ್ಯ ಗಡಿಗಳನ್ನು ಮುಕ್ತವಾಗಿ ಇಡುವಂತೆ ರಾಜ್ಯಗಳಿಗೆ ಆ.22ರಂದು ಆದೇಶಿಸಿತ್ತು. ಅದರಂತೆ ಆ.24ರಿಂದ ಕರ್ನಾಟಕವು ತನ್ನೆಲ್ಲ ಅಂತರರಾಜ್ಯ ಗಡಿಗಳನ್ನೂ ಮುಕ್ತವಾಗಿಸಿತ್ತು. ಆದರೂ ಗೋವಾ ಈ ಆದೇಶವನ್ನು ಪಾಲಿಸಿರಲಿಲ್ಲ. ಇದು ಸ್ಥಳೀಯರ ಹಾಗೂ ಕಾರವಾರದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.</p>.<p>ತನ್ನ ರಾಜ್ಯದೊಳಗೆ ಬರುವವರು ಕೋವಿಡ್ 19 ನೆಗೆಟಿವ್ ತರಬೇಕು. ಇದಾಗಿದಿದ್ದರೆ 14 ದಿನ ಹೋಂ ಕ್ವಾರಂಟೈನ್ ಆಗಬೇಕು. ಒಂದುವೇಳೆ, ಈ ಎರಡೂ ಷರತ್ತುಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ ₹ 2 ಸಾವಿರ ಪಾವತಿಸಿ ಗಂಟಲುದ್ರವದ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಿತ್ತು. ಗೋವಾದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕಾರವಾರ, ಅಂಕೋಲಾ ಭಾಗದ ಜನರಿಗೆ ಈ ನಿಯಮದಿಂದಾಗಿ ಭಾರಿ ತೊಂದರೆಯಾಯಿತು.</p>.<p>ತನ್ನ ನಿಯಮಗಳನ್ನು ಹಿಂಪಡೆದು ಮುಕ್ತ ಸಂಚಾರಕ್ಕೆ ಅವಕಾಶ ನೀಡುವಂತೆ ವಿವಿಧ ಸಂಘಟನೆಗಳೂ ಗೋವಾ ಸರ್ಕಾರವನ್ನು ಆಗ್ರಹಿಸಿದ್ದರು. ಮಾಜಾಳಿಯಲ್ಲಿ ಆ.29ರಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆಯನ್ನೂ ನಡೆಸಿದ್ದರು.</p>.<p>ಈ ನಡುವೆ, ಶಾಸಕಿ ರೂಪಾಲಿ ನಾಯ್ಕ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಮಸ್ಯೆಯನ್ನು ವಿವರಿಸಿದ್ದರು. ಇದಕ್ಕೆ ಸ್ಪಂದಿಸಿದ ಸಾವಂತ, ಕೇಂದ್ರ ಸರ್ಕಾರದ ನಿರ್ದೇಶನಂತೆ ಸೆ.1ರಿಂದ ಗೋವಾದ ಎಲ್ಲ ಗಡಿಗಳನ್ನೂ ತೆರವು ಮಾಡುವುದಾಗಿ ಭರವಸೆ ನೀಡಿದ್ದರು.</p>.<p class="Subhead"><strong>ಸಿಹಿ ಹಂಚಿ ಸಂಭ್ರಮ:</strong>ಮಾಜಾಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಗೋವಾ ಗಡಿಯಲ್ಲಿ ಸಂಚಾರ ನಿರ್ಬಂಧವನ್ನು ಸಂಪೂರ್ಣವಾಗಿ ತೆರವು ಮಾಡಿದ್ದು ಕಾರವಾರದ ಜನರ ಸಂತಸಕ್ಕೆ ಕಾರಣವಾಗಿದೆ. ಗೋವಾ ಚೆಕ್ಪೋಸ್ಟ್ಗೆ ತೆರಳಿದ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ನೇತೃತ್ವದಲ್ಲಿ, ಅಲ್ಲಿನ ಸರ್ಕಾರಿ ಸಿಬ್ಬಂದಿ, ವಾಹನ ಚಾಲಕರಿಗೆ ಸಿಹಿ ವಿತರಿಸಿದರು.</p>.<p>ಗೋವಾ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೆರವು ಮಾಡಿರುವ ಕಾರಣ ಬಸ್ ಸಂಚಾರವೂ ಹಂತಹಂತವಾಗಿ ಆರಂಭವಾಗುವ ನಿರೀಕ್ಷೆಯಿದೆ. ಕರ್ನಾಟಕದ ಗಡಿಯ ಸಮೀಪದಲ್ಲಿರುವ ಪೋಳೆಂ ಸುತ್ತಮುತ್ತ ಇರುವ ವಿವಿಧ ಅಂಗಡಿ, ಹೋಟೆಲ್, ಬಾರ್ಗಳ ಮಾಲೀಕರೂ ವ್ಯಾಪಾರ, ವಹಿವಾಟು ನಡೆಸಲು ಸಿದ್ಧತೆ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>