<p><strong>ಕಾರವಾರ: </strong>ಶಿರಸಿ– ಕುಮಟಾ ರಾಜ್ಯ ಹೆದ್ದಾರಿಯು ಕಡಿದಾದ ತಿರುವುಗಳಿಂದ ಕೂಡಿದೆ. ಈ ರಸ್ತೆಯ ಹಲವೆಡೆ ಒಂದುಬಸ್ ಹೋದರೆ ಎದುರಿನಿಂದ ಬರುತ್ತಿರುವ ಮತ್ತೊಂದು ವಾಹನವನ್ನು ಬದಿಗೆ ನಿಲ್ಲಿಸುವಂತಹ ಅನಿವಾರ್ಯತೆಯಿದೆ. ಇಂಥ ರಸ್ತೆಯಲ್ಲಿ ಹಗಲು ಹೊತ್ತಿನಲ್ಲೇ ಭಾರಿ ಸರಕು ತುಂಬಿದ ಲಾರಿಗಳು ಸಂಚರಿಸುತ್ತಿವೆ.</p>.<p>ಇಡೀ ರಸ್ತೆಯನ್ನು ಆಕ್ರಮಿಸಿಕೊಳ್ಳುವ ಇವು ತಿರುವುಗಳಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಚಿತ್ರದಲ್ಲಿರುವ ಲಾರಿಯ ಹೊರಭಾಗದಲ್ಲಿ ಸುಮಾರು ನಾಲ್ಕೈದು ಅಡಿಗಳಷ್ಟು ಅಗಲಕ್ಕೆ ಸರಕು ಹೇರಲಾಗಿತ್ತು. ಕತಗಾಲದ ಸಮೀಪ ಇದನ್ನು ಕಂಡ ಇತರ ವಾಹನಗಳ ಚಾಲಕರು ರಸ್ತೆ ಬಿಟ್ಟು ಬದಿಗೆ ಸರಿದು ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ತಾನು ಸಾಗುವ ರಸ್ತೆಯುದ್ದಕ್ಕೂ ಇದೇ ರೀತಿ ತೊಂದರೆ ಕೊಡುತ್ತಾ ಈ ಲಾರಿ ಹೋಗಿರುತ್ತದೆ. ಇದನ್ನು ಸಾರಿಗೆ ಇಲಾಖೆಯವರು ಅಥವಾ ಪೊಲೀಸರು ಯಾಕೆ ಗಮನಿಸಲಿಲ್ಲ ಎಂಬುದುಅಚ್ಚರಿ ಮೂಡಿಸುತ್ತದೆ.</p>.<p>ಕುಮಟಾದಲ್ಲಿ ಕಳೆದ ವರ್ಷ ಲಾರಿಯೊಂದರಲ್ಲಿ ವಿಪರೀತವಾಗಿ ಹೇರಿದ್ದ ಕಬ್ಬಿಣದ ಸರಕು ಬಸ್ನ ಒಳಹೊಕ್ಕು ಆಗಿದ್ದ ಅನಾಹುತ ಇನ್ನೂ ಸ್ಥಳೀಯರ ನೆನಪಿನಲ್ಲಿದೆ. ಆದರೂ ಈ ರೀತಿ ಸರಕು ಸಾಗಣೆಯನ್ನು ನಿಯಂತ್ರಿಸದಿರುವುದು ಬೇಸರ ತರಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಶಿರಸಿ– ಕುಮಟಾ ರಾಜ್ಯ ಹೆದ್ದಾರಿಯು ಕಡಿದಾದ ತಿರುವುಗಳಿಂದ ಕೂಡಿದೆ. ಈ ರಸ್ತೆಯ ಹಲವೆಡೆ ಒಂದುಬಸ್ ಹೋದರೆ ಎದುರಿನಿಂದ ಬರುತ್ತಿರುವ ಮತ್ತೊಂದು ವಾಹನವನ್ನು ಬದಿಗೆ ನಿಲ್ಲಿಸುವಂತಹ ಅನಿವಾರ್ಯತೆಯಿದೆ. ಇಂಥ ರಸ್ತೆಯಲ್ಲಿ ಹಗಲು ಹೊತ್ತಿನಲ್ಲೇ ಭಾರಿ ಸರಕು ತುಂಬಿದ ಲಾರಿಗಳು ಸಂಚರಿಸುತ್ತಿವೆ.</p>.<p>ಇಡೀ ರಸ್ತೆಯನ್ನು ಆಕ್ರಮಿಸಿಕೊಳ್ಳುವ ಇವು ತಿರುವುಗಳಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಚಿತ್ರದಲ್ಲಿರುವ ಲಾರಿಯ ಹೊರಭಾಗದಲ್ಲಿ ಸುಮಾರು ನಾಲ್ಕೈದು ಅಡಿಗಳಷ್ಟು ಅಗಲಕ್ಕೆ ಸರಕು ಹೇರಲಾಗಿತ್ತು. ಕತಗಾಲದ ಸಮೀಪ ಇದನ್ನು ಕಂಡ ಇತರ ವಾಹನಗಳ ಚಾಲಕರು ರಸ್ತೆ ಬಿಟ್ಟು ಬದಿಗೆ ಸರಿದು ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ತಾನು ಸಾಗುವ ರಸ್ತೆಯುದ್ದಕ್ಕೂ ಇದೇ ರೀತಿ ತೊಂದರೆ ಕೊಡುತ್ತಾ ಈ ಲಾರಿ ಹೋಗಿರುತ್ತದೆ. ಇದನ್ನು ಸಾರಿಗೆ ಇಲಾಖೆಯವರು ಅಥವಾ ಪೊಲೀಸರು ಯಾಕೆ ಗಮನಿಸಲಿಲ್ಲ ಎಂಬುದುಅಚ್ಚರಿ ಮೂಡಿಸುತ್ತದೆ.</p>.<p>ಕುಮಟಾದಲ್ಲಿ ಕಳೆದ ವರ್ಷ ಲಾರಿಯೊಂದರಲ್ಲಿ ವಿಪರೀತವಾಗಿ ಹೇರಿದ್ದ ಕಬ್ಬಿಣದ ಸರಕು ಬಸ್ನ ಒಳಹೊಕ್ಕು ಆಗಿದ್ದ ಅನಾಹುತ ಇನ್ನೂ ಸ್ಥಳೀಯರ ನೆನಪಿನಲ್ಲಿದೆ. ಆದರೂ ಈ ರೀತಿ ಸರಕು ಸಾಗಣೆಯನ್ನು ನಿಯಂತ್ರಿಸದಿರುವುದು ಬೇಸರ ತರಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>