ಊರವರೆಲ್ಲ ಸೇರಿ ಮಗುವನ್ನು ಹುಡುಕಿದರೂ ಕಾಣದಿದ್ದಾಗ, ಅನಿವಾರ್ಯವಾಗಿ ಭಾನುವಾರ ಸಂಜೆ ಪೊಲೀಸರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ. ಭಾನುವಾರ ರಾತ್ರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸೋಮವಾರ ಬೆಳಗಿನವರೆಗೂ ಮಗುವನ್ನು ಹುಡುಕಿದ್ದಾರೆ. ಅಲ್ಲದೆ, ದೇವರಲ್ಲಿ ಪ್ರಸಾದ, ಅಂಜನ, ಮಾಂತ್ರಿಕರನ್ನು ಕರೆಸಿ ಸಹ ಮಗುವನ್ನು ಹುಡುಕಿಸಲು ಪ್ರಯತ್ನ ನಡೆಸಲಾಗಿದೆ. ಸೋಮವಾರ ಬೆಳಕು ಹರಿದ ಮೇಲೆ, ನೀರು ತರಲು ಹೋದವರಿಗೆ ಮಗುವಿನ ಶವ ಬಾವಿಯಲ್ಲಿ ತೇಲುತ್ತಿರುವುದು ಕಂಡಿದೆ.