‘ಕಾಳಿ ನಮಗೆ ಜೀವ ಜಲವಾಗಿದ್ದು, ಇದನ್ನೇಅವಲಂಬಿಸಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಇದರ ಸುತ್ತ ಇರುವ ಜೊಯಿಡಾ, ದಾಂಡೇಲಿ, ಯಲ್ಲಾಪುರ, ಕಾರವಾರ, ಹಳಿಯಾಳ ತಾಲ್ಲೂಕಿನ ಜನರು ತ್ಯಾಗಮಾಡಿಕೊಂಡು ಬಂದವರಾಗಿದ್ದಾರೆ. ಅವರ ತ್ಯಾಗಕ್ಕೆ ತಕ್ಕ ಪ್ರತಿಫಲ ಸಿಗದೆ ನೋವು ಅನುಭವಿಸುತ್ತಿದ್ದಾರೆ.ಶೇ 90ರಷ್ಟು ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸರಿಯಾದ ವ್ಯವಸ್ಥೆ ಇಲ್ಲ. ಜೊಯಿಡಾ, ರಾಮನಗರಗಳಲ್ಲಿ 10– 15 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ದಾಂಡೇಲಿಯಲ್ಲಿ ವಾರಕ್ಕೊಮ್ಮೆ ಸಿಗುತ್ತಿದೆ’ ಎಂದು ದೂರಿದರು.