ಜಲಾಶಯದ ಜಲಾನಯನ ಪ್ರದೇಶದಲ್ಲಿರುವ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ಅದರಿಂದ ಏಕಾಏಕಿ ಹೊರಬಂದ ಭಾರಿ ಪ್ರಮಾಣದ ನೀರನ್ನು ಕಂಡು ಜಲಾಶಯವೇ ಬಿರುಕು ಬಿಟ್ಟಿದೆ ಎಂದು ಯಾರೋ ವಾಟ್ಸ್ ಆ್ಯಪ್ ನಲ್ಲಿ ಸುದ್ದಿ ಹಬ್ಬಿಸಿದರು. ಇದನ್ನು ನಂಬಿದ ನೂರಾರು ಗ್ರಾಮಸ್ಥರು ಬಟ್ಟೆ, ದಿನಸಿಗಳನ್ನು ಗಂಟುಮೂಟೆ ಕಟ್ಟಿಕೊಂಡು ಅಳುತ್ತಾ ಊರು ತೊರೆದರು. ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ವದಂತಿಗೆ ಕಿವಿಗೊಡಬೇಡಿ, ಅಣೆಕಟ್ಟೆಗೆ ಏನೂ ಆಗಿಲ್ಲ. ಸುರಕ್ಷಿತವಾಗಿದೆ ಎಂದರೂ ಕೇಳಲಿಲ್ಲ.