ಚಂಡಿಕಾ ಹೊಳೆಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಕುಮಟಾ- ಶಿರಸಿ ನಡುವೆ ಬಸ್ ಸಂಚಾರ ಶುರುವಾಗಿದೆ. ಆದರೆ, ಅಂಕೋಲಾ- ಯಲ್ಲಾಪುರ ನಡುವೆ ಬೆಳಿಗ್ಗೆ 10ರವರೆಗೂ ವಾಹನ ಸಂಚಾರ ಆರಂಭವಾಗಲಿಲ್ಲ. ಸುಂಕಸಾಳದಲ್ಲಿ ಗಂಗಾವಳಿ ನದಿಯ ನೀರು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹರಿಯುತ್ತಿದೆ. ಹಾಗಾಗಿ ಈ ರಸ್ತೆಯಿಂದ ನಿತ್ಯವೂ ಕರಾವಳಿಗೆ ಬರುವ ದಿನಪತ್ರಿಕೆ, ತರಕಾರಿ, ದಿನಸಿ ಸಾಗಣೆಯ ಹಲವು ವಾಹನಗಳು ಬುಧವಾರ ಸಂಚರಿಸಿಲ್ಲ.