'ಕಳೆದ ವರ್ಷವೂ ಆ.5ರಂದು ಗಂಗಾವಳಿ ನದಿಯ ನೀರು ಉಕ್ಕಿ ಹರಿದಿತ್ತು. ನಂತರ ಭೀಕರ ಪ್ರವಾಹ ಉಂಟಾಗಿದ್ದು ಇನ್ನೂ ಕಣ್ಣ ಮುಂದಿದೆ. ರಸ್ತೆ ಈ ರೀತಿ ಜಲಾವೃತವಾಗಿ ಸಂಪರ್ಕ ಕಡಿತವಾಗುವುದು ಪ್ರತಿ ವರ್ಷದ ವಿದ್ಯಮಾನವಾಗಿದೆ. ಡೊಂಗ್ರಿ ಗ್ರಾಮದಲ್ಲಿ ಸುಮಾರು 25 ಮನೆಗಳಿವೆ. ಮಳೆ ಮುಂದುವರಿದರೆ ಅಪಾಯವಾಗಬಹುದು' ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.