ಬೆಂಗಳೂರಿನಲ್ಲಿ ಹೇಗಿದೆ?: ಮಗುವನ್ನು ಕಲಾಪಕ್ಕೆ ಕರೆದುಕೊಂಡು ಬರಲು ಪ್ರತ್ಯೇಕ ದಾರಿಯಿರುತ್ತದೆ. ಇದು ನಿರ್ಬಂಧಿತ ಪ್ರದೇಶವಾಗಿದ್ದು, ನ್ಯಾಯಾಧೀಶರು, ಪೋಷಕರು ಮತ್ತು ಮಗುವನ್ನು ಹೊರತುಪಡಿಸಿ ಮತ್ಯಾರಿಗೂ ಪ್ರವೇಶಾವಕಾಶ ಇರುವುದಿಲ್ಲ. ಇಲ್ಲಿಂದ ವಿಶ್ರಾಂತಿ ಕೊಠಡಿಗೆ ತಲುಪಬಹುದು.ಆಟಿಕೆಗಳು, ಪುಸ್ತಕಗಳು, ಬಣ್ಣ ಬಣ್ಣದ ಚಿತ್ತಾರ ಮೂಡಿಸಿದ ಗೋಡೆ ಇರುವಕೊಠಡಿ ಇದಾಗಿರುತ್ತದೆ. ಪ್ರಕರಣದ ವಿಚಾರಣೆ ಆರಂಭವಾದ ಬಳಿಕ ಮಗುವನ್ನು ಗಾಜಿನ ಪೆಟ್ಟಿಗೆಗೆ ಕರೆದುಕೊಂಡು ಬರಲಾಗುತ್ತದೆ. ಅಲ್ಲಿಂದಲೇ ವಿಚಾರಣೆ ನಡೆಯುತ್ತದೆ.