‘ಜಲ ಜಾಗೃತಿ ಮೂಡಿಸುತ್ತಿರುವ ಹಾಸಣಗಿ ಸೊಸೈಟಿ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ, ಗೋಪಾಲ ಭಟ್ಟ, ನಾಗರಾಜ ಹೆಗಡೆ, ನವೀನ ಹೆಗಡೆ, ಊರಿನ ಪ್ರತಿಯೊಬ್ಬರೂ ತಮ್ಮ ಮನೆಯ ಕೆಲಸದಂತೆ, ಕೆರೆ ಕಾಯಕದಲ್ಲಿ ತೊಡಗಿಕೊಂಡರು. ಜೋಡುಕೆರೆ ಒಳ್ಳೆಯ ಫಲಿತಾಂಶ ಕೊಡುತ್ತದೆ ಎಂದು ಕಳವೆ ಹೇಳಿದ್ದರು ಹೀಗಾಗಿ, ದೊಡ್ಡ ಕೆರೆಯ ಮೇಲ್ಭಾಗದಲ್ಲಿ ನೀರಿಂಗಲು ಸಣ್ಣ ಕೆರೆ ನಿರ್ಮಿಸಿದೆವು. ಕೆಲಸಗಾರರಿಗೆ ಪ್ರತಿ ಮನೆಯಲ್ಲಿ ಒಂದೊಂದು ದಿನ ಊಟ, ಚಹಾದ ವ್ಯವಸ್ಥೆ ಮಾಡಿದೆವು. ಕೆರೆ ಹೂಳೆತ್ತಿದ ವರ್ಷ ಉತ್ತಮ ಮಳೆಯಾಯಿತು. ಕೆರೆ ತುಂಬಿತು’ ಎಂದು ಅವರು ಕೆರೆ ಕಟ್ಟಿದ ಕಥೆ ಬಿಚ್ಚಿಟ್ಟರು.