ಈ ನಡುವೆ, ಜಿಲ್ಲೆಯಲ್ಲಿ ಜುಲೈ 23ರಂದು ಶುರುವಾದ ಭಾರಿ ಮಳೆಯಿಂದ ಮೂರು ದಿನ ಪ್ರವಾಹ ಉಂಟಾಯಿತು. ಜುಲೈ 24ರಂದು ಬೆಳಗಾವಿಯಲ್ಲಿ ನೆರೆ ಪೀಡಿದ ಪ್ರದೇಶಗಳನ್ನು ವೀಕ್ಷಿಸಿದ್ದರು. ಅಲ್ಲಿಂದ ಉತ್ತರ ಕನ್ನಡಕ್ಕೂ ಭೇಟಿ ನೀಡುವ ನಿರೀಕ್ಷೆ ಮೂಡಿತ್ತು. ಆದರೆ, ಅವರು ಬೆಂಗಳೂರಿಗೆ ಮರಳಿ, ಜಿಲ್ಲೆಗೆ ಭೇಟಿ ನೀಡುವ ಬಗ್ಗೆ ಜುಲೈ 26ರಂದು ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ಹೇಳಿದ್ದರು. ಸೋಮವಾರ ನಡೆದ ಬೆಳವಣಿಗೆಯಲ್ಲಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.