ಮುನ್ನೆಚ್ಚರಿಕೆಯಾಗಿ ಪರಿಹಾರ ಕೇಂದ್ರ:ಸುರೇಶ ಅವರ ಮನೆಯಲ್ಲಿ ಆರು ಮಂದಿಯಿದ್ದು, ಕೆರವಡಿ ಗ್ರಾಮ ಪಂಚಾಯ್ತಿಯುಮುನ್ನೆಚ್ಚರಿಕೆಯಾಗಿ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿಯಲ್ಲಿ ಪರಿಹಾರ ಕೇಂದ್ರ ತೆರೆದಿದೆ. ಆದರೆ, ಅವರ ಮನೆಯಿಂದ ಇಲ್ಲಿಗೆ ಸುಮಾರು ಎರಡು ಕಿಲೋಮೀಟರ್ ದೂರವಿದೆ. ಹಾಗಾಗಿ ಅವರ ಕುಟುಂಬದ ಆತಂಕವನ್ನು ದೂರ ಮಾಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.