ಕಿಮಾನಿಯ ವಿಷ್ಣು ನಾಗಪ್ಪ ಹರಿಕಾಂತ ಅವರ ಮನೆಯ ನಾಯಿ ಮರಿ ಬೆಳಗಿನ ಜಾವ ಕಿರುಚಿಕೊಂಡಿದ್ದು ಕೇಳಿ ಮನೆಯವರು ಹೊರಗೆ ಬಂದು ನೋಡಿದರು. ಆಗ ನಾಯಿ ಪಂಜರದ ಮೂಲೆಯಲ್ಲಿ ಕುಳಿತು ಚಿರತೆ ಗರ್ಜಿಸುತ್ತಿತ್ತು. ಇನ್ನೊಂದು ಮೂಲೆಯಲ್ಲಿದ್ದ ನಾಯಿ ಮರಿ ಬೆದರಿ ಚೀರುತ್ತಿತ್ತು. ಇದನ್ನು ಕಂಡು ಮನೆಯವರು ಉದ್ದ ಕಬ್ಬಿಣದ ಸರಳಿನ ಸಹಾಯದಿಂದ ನಾಯಿ ಪಂಜರದ ಬಾಗಿಲು ಮುಚ್ಚಿದರು.