ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ನಾಯಿ ಬೇಟೆಗೆ ಬಂದ ಚಿರತೆ ನಾಯಿ ಪಂಜರದಲ್ಲೇ ಬಂಧಿ!

Last Updated 16 ಸೆಪ್ಟೆಂಬರ್ 2021, 6:49 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ಕಿಮಾನಿಯಲ್ಲಿ ಗುರುವಾರ ಮುಂಜಾನೆ ನಾಯಿ ಬೇಟೆಯಾಡಲು ಊರಿಗೆ ಬಂದ ಚಿರತೆಯೊಂದು, ಮನೆಯ ಅಂಗಳದಲ್ಲಿರುವ ನಾಯಿ ಪಂಜರದಲ್ಲಿ ಆಕಸ್ಮಿಕವಾಗಿ ಸೆರೆಯಾಗಿದೆ.

ಕಿಮಾನಿಯ ವಿಷ್ಣು ನಾಗಪ್ಪ ಹರಿಕಾಂತ ಅವರ ಮನೆಯ ನಾಯಿ ಮರಿ ಬೆಳಗಿನ ಜಾವ ಕಿರುಚಿಕೊಂಡಿದ್ದು ಕೇಳಿ ಮನೆಯವರು ಹೊರಗೆ ಬಂದು ನೋಡಿದರು. ಆಗ ನಾಯಿ ಪಂಜರದ ಮೂಲೆಯಲ್ಲಿ ಕುಳಿತು ಚಿರತೆ ಗರ್ಜಿಸುತ್ತಿತ್ತು. ಇನ್ನೊಂದು ಮೂಲೆಯಲ್ಲಿದ್ದ ನಾಯಿ ಮರಿ ಬೆದರಿ ಚೀರುತ್ತಿತ್ತು. ಇದನ್ನು ಕಂಡು ಮನೆಯವರು ಉದ್ದ ಕಬ್ಬಿಣದ ಸರಳಿನ ಸಹಾಯದಿಂದ ನಾಯಿ ಪಂಜರದ ಬಾಗಿಲು ಮುಚ್ಚಿದರು.

'ಜನರನ್ನು ನೋಡಿ ಭಯಗೊಂಡ ಚಿರತೆ ನಾಯಿಗೆ ಏನೂ ಮಾಡದೆ ಸುಮ್ಮನೆ ಕುಳಿತಿತ್ತು. ಅರಣ್ಯ ಇಲಾಖೆಗೆ ಮಾಹಿತಿ‌ ನೀಡಿದಾಗ ಸಿಬ್ಬಂದಿ ಬಂದು ಚಿರತೆಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದರು' ಎಂದು ಹಿರೇಗುತ್ತಿ ವಲಯ ಅರಣ್ಯ ಅಧಿಕಾರಿ ನರೇಶ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT