ಬೆಂಬಲ ಬೆಲೆಗೆ ಒತ್ತಾಯ:‘ಸರ್ಕಾರವು ರೈತರ ನೆರವಿಗೆ ಬರಬೇಕು. ಗೋವಿನಜೋಳ ಈ ವರ್ಷ ಕಡಿಮೆ ಪ್ರಮಾಣದಲ್ಲಿದ್ದರೂ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಬೆಳೆಗೆ ಬೆಂಬಲ ಬೆಲೆ ಘೊಷಿಸಿದರೆ ಮಾತ್ರ ರೈತನ ಬೆವರಿಗೆ ಫಲ ಸಿಕ್ಕಂತಾಗುತ್ತದೆ. ಪಕ್ಕದ ಹಾವೇರಿ, ರಾಣೇಬೆನ್ನೂರು, ಕಲಘಟಗಿ ಮಾರುಕಟ್ಟೆಯಲ್ಲಿ ಇರುವ ದರ ಮುಂಡಗೋಡ ತಾಲ್ಲೂಕಿನಲ್ಲಿ ಇಲ್ಲ. ಬೆಳೆ ಬಂದಾಗ ರೈತ ಅನುಭವಿಸುವ ತೊಂದರೆ ದೂರ ಮಾಡಲು, ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು' ಎಂದು ಪ್ರಗತಿಪರ ರೈತ ಶಿವಜ್ಯೋತಿ ಆಗ್ರಹಿಸುತ್ತಾರೆ.