‘ದುಡಿಯಲು ಹೋಗದೆ ಮನೆಯಲ್ಲೇ ಕಾಲ ಕಳೆಯಬೇಡ ಎಂದು ತಮ್ಮ ಅರ್ಜುನ್ ಬುದ್ಧಿವಾದ ಹೇಳಿದಾಗ ಅಣ್ಣ ಕೃಷ್ಣ ಸಿಟ್ಟಿನಿಂದ, ಕೊಲೆ ಮಾಡುವುದಾಗಿ ತಮ್ಮನಿಗೆ ಹೆದರಿಸುತ್ತಿದ್ದ. ಭಾನುವಾರ ರಾತ್ರಿ ನಾನು ಹೋಟೆಲ್ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದಾಗ ಕೃಷ್ಣ ಮನೆಗೆ ಬೀಗ ಹಾಕಿ ಎಲ್ಲಿಯೋ ಹೋಗಿದ್ದ. ಫೋನ್ ಮಾಡಿದರೂ ಬರಲಿಲ್ಲ. ಪಕ್ಕದ ಮನೆಯವರೊಬ್ಬರ ಸಹಾಯ ಪಡೆದು ಬೀಗ ಮುರಿದು ಒಳಗೆ ಹೋದಾಗ ಅರ್ಜುನ್ ಕೊಲೆಯಾಗಿರುವುದು ಕಂಡುಬಂತು’ ಎಂದು ಅರ್ಜುನ್ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.