‘ಮಠದ ಭಕ್ತರು ಮೇ 6ರಂದು ಲಕ್ಷ್ಮೀ ನರಸಿಂಹ ಜಯಂತಿಯ ಉತ್ಸವದ ದಿನ ಸಂಜೆ 6 ಗಂಟೆಗೆ ದೇವರಿಗೆ ದೀಪ ಹಚ್ಚಿ, ಪಾನಕದ ಸೇವೆಯನ್ನು ಮಾಡಬೇಕು. ಜೊತೆಗೆ ಮಠದ ಸ್ಮರಣೆ ಮಾಡಿ ಮನೆಯಲ್ಲಿಯೇ ಉತ್ಸವ ಆಚರಣೆ ಮಾಡಬೇಕು. ಜಾಗತಿಕ ಸಮಸ್ಯೆ ನಿವಾರಣೆ ಆಗಲು ದೇವರಿಗೆ ಜಪ, ಪೂಜೆ, ಪ್ರಾರ್ಥನೆಯನ್ನು ಮಾಡಬೇಕು. ಬೆಳಗಿನ ವೇಳೆ ಆಸನ, ಪ್ರಾಣಾಯಾಮ ಮಾಡಬೇಕು. ಇವುಗಳಿಂದ ಶಾರೀರಿಕ ಹಾಗೂ ಮಾನಸಿಕವಾಗಿ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಅದರ ಜೊತೆಗೆ ದೇವರ ಪೂಜೆ ಮಾಡಿದಲ್ಲಿ ಭಗವಂತನ ಅನುಗ್ರಹದಿಂದ ಎಲ್ಲವೂ ಸರಿ ಹೋಗುತ್ತದೆ’ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.