‘ಉತ್ಸವದ ಹೊತ್ತಿಗಷ್ಟೇ ವೇದಿಕೆಯು ಸುಣ್ಣ, ಬಣ್ಣ ಕಂಡು ಮಿಂಚುತ್ತದೆ. ಎರಡು ದಿನದ ಸಂಭ್ರಮ ಮುಗಿದ ಬಳಿಕ ವೇದಿಕೆಯತ್ತ ಕಣ್ಣೆತ್ತಿ ನೋಡುವವರಿಲ್ಲದ ಸ್ಥಿತಿ ಇದೆ. ಈ ಹಿಂದೆ ಹಲವಾರು ಬಾರಿ ಮಯೂರವರ್ಮನ ಹೆಸರಿನಲ್ಲಿ ಶಾಶ್ವತ ರಂಗಮಂದಿರ ನಿರ್ಮಿಸುವ ಭರವಸೆಯನ್ನು ಅನೇಕ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ನೀಡಿದ್ದಾರೆ. ಅವು ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.