‘ಅಬಿತೋಟದಿಂದ ಆರಂಭವಾಗಿ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಮಂಗಗಳ ಹಿಂಡು ರಸ್ತೆ ದಾಟುತ್ತವೆ. ಆಗ ವೇಗವಾಗಿ ಬರುವ ವಾಹನಗಳಿಗೆ ಸಿಲುಕಿ ಸಾಯುತ್ತಿವೆ. ಕೈ, ಕಾಲು ಮುರಿದುಕೊಂಡು ಯಾತನೆ ಪಡುತ್ತ ಅರಚುವುದನ್ನು ನೋಡಿದರೆ ಕಣ್ಣೀರು ಬರುತ್ತದೆ. ಆಗಾಗ ಈ ರೀತಿಯ ಘಟನೆಗಳು ಆಗುತ್ತಿದ್ದರೂ ಹಲವರು ಸ್ಪಂದಿಸುತ್ತಿಲ್ಲ. ಕೆಲವರು ಮುತುವರ್ಜಿ ತೋರಿಸಿದರೂ ಬಾಯಿಗೆ ನೀರು ಹಾಕುವಷ್ಟರಲ್ಲಿ ಅವುಗಳ ಉಸಿರು ನಿಂತು ಬಿಡುತ್ತದೆ. ಇಲ್ಲಿ ಪ್ರಾಣಿಗಳನ್ನು ಚಿಕಿತ್ಸೆಗೆ ಸಾಗಿಸಲು ಆಂಬುಲೆನ್ಸ್ ಇಲ್ಲ’ ಎಂದು ಹೊನ್ನಾವರದ ಶ್ರೀಕಾಂತ ಪಟಗಾರ್ ಬೇಸರಿಸುತ್ತಾರೆ.