ಕಾರವಾರ/ ಯಲ್ಲಾಪುರ: ಅಂಕೋಲಾ ತಾಲ್ಲೂಕಿನ ಸುಂಕಸಾಳ, ಅಗಸೂರು ಬಳಿಯ ನವಮಿ ಹೋಟೆಲ್ನ ಎರಡನೇ ಮಹಡಿ ಮೇಲೆ ಬೆಂಗಳೂರಿನ ನಾಲ್ವರು ಗುರುವಾರದಿಂದ ಸಿಕ್ಕಿ ಹಾಕಿಕೊಂಡಿದ್ದಾರೆ. ಕಾರು ಕೊಚ್ಚಿಹೋಗದಂತೆ ಹಗ್ಗ ಹಾಕಿ ಕಟ್ಟಿ ಇಟ್ಟಿದ್ದರು.
ಏರುತ್ತಿರುವ ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗಿದೆ. ಜಿಲ್ಲಾಧಿಕಾರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಏರ್ ಲಿಫ್ಟ್ ಮಾಡುವ ಬಗ್ಗೆ ಪ್ರಯತ್ನಿಸುವುದಾಗಿ ಹೇಳಿದ್ದಾರೆ ಎಂಬ ಮಾಹಿತಿ ಬಂದಿದೆ.
ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ 11 ಗೇಟ್ಗಳ ಪೈಕಿ 10 ಗೇಟ್ಗಳನ್ನು ತೆರೆಯಲಾಗಿದೆ. ಬೆಳಿಗ್ಗೆ 7 ಗಂಟೆಯ ಮಾಹಿತಿಯಂತೆ, ಕಾಳಿ ನದಿಗೆ 81,285 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಸಮೀಪದ ಕುರ್ನಿಪೇಟೆ, ಮಲ್ಲಾಪುರ ಗ್ರಾಮದ ಹಲವು ಪ್ರದೇಶಗಳು ಮುಳುಗಡೆಯಾಗಿವೆ.