<p><strong>ಕಾರವಾರ:</strong> ಜಿಲ್ಲೆಯ ಮಾಂಸದ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವು ಇನ್ನುಮುಂದೆ ವ್ಯರ್ಥವಾಗುವುದಿಲ್ಲ. ಅದು ಸಾಕುಪ್ರಾಣಿಗಳ ಆಹಾರವಾಗಿ ಬದಲಾಗಲಿದೆ!</p>.<p>ಹೌದು, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯು ಮಾಂಸದ ತ್ಯಾಜ್ಯ ವಿಲೇವಾರಿಗೆ ಹೊಸ ವಿಧಾನವನ್ನು ಕಂಡುಕೊಂಡಿದೆ. ಇದಕ್ಕಾಗಿ ಸಾಕುಪ್ರಾಣಿಗಳ ಆಹಾರ ತಯಾರಿಸುವ ಮಂಗಳೂರಿನ ಕಾರ್ಖಾನೆಯೊಂದರ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಡಿಯಿಟ್ಟಿದೆ.</p>.<p>ಆರಂಭದಲ್ಲಿ ಕರಾವಳಿಯ ಎಂಟು ದೊಡ್ಡ ಗ್ರಾಮ ಪಂಚಾಯಿತಿಗಳನ್ನು ಈ ಯೋಜನೆಗೆ ಸೇರಿಸಿಕೊಳ್ಳಲಾಗಿದೆ. ಕಾರವಾರ ತಾಲ್ಲೂಕಿನ ಚಿತ್ತಾಕುಲಾ, ಅಂಕೋಲಾ ತಾಲ್ಲೂಕಿನ ಅವರ್ಸಾ ಮತ್ತು ಹಟ್ಟಿಕೇರಿ, ಕುಮಟಾ ತಾಲ್ಲೂಕಿನ ಗೋಕರ್ಣ, ಭಟ್ಕಳ ತಾಲ್ಲೂಕಿನ ಮಾವಳ್ಳಿ 1 ಮತ್ತು ಮಾವಳ್ಳಿ 2, ಶಿರಾಲಿ ಹಾಗೂ ಹೆಬಳೆ ಗ್ರಾಮ ಪಂಚಾಯಿತಿಗಳಲ್ಲಿ ಉತ್ಪತ್ತಿಯಾಗುವ ಮಾಂಸದ ತ್ಯಾಜ್ಯಗಳನ್ನು ಮಂಗಳೂರಿಗೆ ರವಾನೆ ಮಾಡಲಾಗುತ್ತದೆ. ಇಲ್ಲಿ ಈಗಾಗಲೇ ಸಂಗ್ರಹ ಕಾರ್ಯ ಆರಂಭವೂ ಆಗಿದೆ.</p>.<p>ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ, ‘ಮಾಂಸದ ತ್ಯಾಜ್ಯ ವಿಲೇವಾರಿಗೆ ಕಾರ್ಖಾನೆಯವರ ಜೊತೆ ಸಭೆ ನಡೆಸಲಾಗಿದ್ದು,<br />ಮುಂದಿನ ವಾರದಿಂದ ಪೂರ್ಣ ಪ್ರಮಾಣದಲ್ಲಿ ಸಂಗ್ರಹಿಸಲಿದ್ದಾರೆ. ಅವರು ನೀಡುವ ಟ್ರೇಗಳಲ್ಲಿ<br />ಪ್ರತಿ ಗ್ರಾಮ ಪಂಚಾಯಿತಿಯ ನಿರ್ದಿಷ್ಟ ಜಾಗದಲ್ಲಿ ತ್ಯಾಜ್ಯವನ್ನು ಸಂಗ್ರಹಿಸಬೇಕು. ಅಲ್ಲಿಂದ ಅವರು ಸಂಪೂರ್ಣ ಮುಚ್ಚಿದ ಲಾರಿಯಲ್ಲಿ ಸಾಗಿಸಲಿದ್ದಾರೆ. ಇದರಿಂದ ಈ ಭಾಗದಲ್ಲಿ ಮಾಂಸದ ತ್ಯಾಜ್ಯ ವಿಲೇವಾರಿಯೂ ಆಗುತ್ತದೆ. ಕಾರ್ಖಾನೆಗೂ ಬೇಕಾದ ಸಾಮಗ್ರಿ ದೊರೆಯುತ್ತದೆ’ ಎಂದು ಹೇಳಿದರು.</p>.<p>‘ತ್ಯಾಜ್ಯ ಸಾಗಣೆಯ ಖರ್ಚು, ವೆಚ್ಚಗಳನ್ನು ಕಾರ್ಖಾನೆಯವರೇ ಭರಿಸಲಿದ್ದಾರೆ. ಮಾಂಸದಂಗಡಿಗಳು, ಗ್ರಾಮ ಪಂಚಾಯಿತಿ ಮತ್ತು ಅವರೊಂದಿಗೆ ಸಮನ್ವಯ ಸಾಧಿಸಲು ಒಬ್ಬರನ್ನು ಜಿಲ್ಲಾ ಪಂಚಾಯಿತಿಯಿಂದ ನಿಯುಕ್ತಿಗೊಳಿಸಲಾಗಿದೆ. ಅಲ್ಲದೇ ಎಂಟೂ ಗ್ರಾಮಗಳಲ್ಲಿ ತ್ಯಾಜ್ಯ ಸಂಗ್ರಹಿಸಿಡಲು ನಿರ್ದಿಷ್ಟ ಜಾಗವನ್ನು ಗುರುತಿಸಿಕೊಡಲಾಗಿದೆ’ ಎಂದು ವಿವರಿಸಿದರು.</p>.<p class="Subhead"><strong>ಕುರಿ ಮಾಂಸವೂ ವಿಲೇವಾರಿ</strong></p>.<p>‘ಮಂಗಳೂರಿನ ಕಾರ್ಖಾನೆಯವರು ಕೋಳಿ ಮಾಂಸದ ತ್ಯಾಜ್ಯವನ್ನು ಹೆಚ್ಚು ಸಂಗ್ರಹಿಸುತ್ತಾರೆ. ನಮ್ಮ ಜಿಲ್ಲೆಯಿಂದ ಕುರಿ ಮಾಂಸದ ತ್ಯಾಜ್ಯವನ್ನೂ ತೆಗೆದುಕೊಂಡು ಹೋಗಲು ತಿಳಿಸಿದ್ದೇವೆ. ಈ ಬಗ್ಗೆ ಎರಡು ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ’ ಎಂದು ಪ್ರಿಯಾಂಗಾ ಹೇಳಿದರು.</p>.<p>‘ಉಡುಪಿಯಲ್ಲಿ ಮೀನು ತ್ಯಾಜ್ಯ ಸಂಗ್ರಹಿಸುವ ಘಟಕವೊಂದಿದೆ. ಅದಕ್ಕೆ ಜಿಲ್ಲೆಯಿಂದ ರವಾನಿಸುವ ಬಗ್ಗೆ ಮಾತುಕತೆ ನಡೆಸಲು ಚಿಂತಿಸಲಾಗಿದೆ’ ಎಂದೂ ತಿಳಿಸಿದರು.</p>.<p><strong>***</strong></p>.<p>ಜಿಲ್ಲೆಯಲ್ಲಿ ಮಾಂಸದ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲು. ಈ ಯೋಜನೆಯಿಂದ ಕಾರ್ಖಾನೆಗೂ ಸಾಮಗ್ರಿ ದೊರೆಯುತ್ತದೆ. ಜೊತೆಗೆ ಜಿಲ್ಲೆಯ ಸಮಸ್ಯೆಯೂ ಪರಿಹಾರವಾಗುತ್ತದೆ.</p>.<p><strong>– ಪ್ರಿಯಾಂಗಾ, ಜಿ.ಪಂ ಸಿ.ಇ.ಒ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಜಿಲ್ಲೆಯ ಮಾಂಸದ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವು ಇನ್ನುಮುಂದೆ ವ್ಯರ್ಥವಾಗುವುದಿಲ್ಲ. ಅದು ಸಾಕುಪ್ರಾಣಿಗಳ ಆಹಾರವಾಗಿ ಬದಲಾಗಲಿದೆ!</p>.<p>ಹೌದು, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯು ಮಾಂಸದ ತ್ಯಾಜ್ಯ ವಿಲೇವಾರಿಗೆ ಹೊಸ ವಿಧಾನವನ್ನು ಕಂಡುಕೊಂಡಿದೆ. ಇದಕ್ಕಾಗಿ ಸಾಕುಪ್ರಾಣಿಗಳ ಆಹಾರ ತಯಾರಿಸುವ ಮಂಗಳೂರಿನ ಕಾರ್ಖಾನೆಯೊಂದರ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಡಿಯಿಟ್ಟಿದೆ.</p>.<p>ಆರಂಭದಲ್ಲಿ ಕರಾವಳಿಯ ಎಂಟು ದೊಡ್ಡ ಗ್ರಾಮ ಪಂಚಾಯಿತಿಗಳನ್ನು ಈ ಯೋಜನೆಗೆ ಸೇರಿಸಿಕೊಳ್ಳಲಾಗಿದೆ. ಕಾರವಾರ ತಾಲ್ಲೂಕಿನ ಚಿತ್ತಾಕುಲಾ, ಅಂಕೋಲಾ ತಾಲ್ಲೂಕಿನ ಅವರ್ಸಾ ಮತ್ತು ಹಟ್ಟಿಕೇರಿ, ಕುಮಟಾ ತಾಲ್ಲೂಕಿನ ಗೋಕರ್ಣ, ಭಟ್ಕಳ ತಾಲ್ಲೂಕಿನ ಮಾವಳ್ಳಿ 1 ಮತ್ತು ಮಾವಳ್ಳಿ 2, ಶಿರಾಲಿ ಹಾಗೂ ಹೆಬಳೆ ಗ್ರಾಮ ಪಂಚಾಯಿತಿಗಳಲ್ಲಿ ಉತ್ಪತ್ತಿಯಾಗುವ ಮಾಂಸದ ತ್ಯಾಜ್ಯಗಳನ್ನು ಮಂಗಳೂರಿಗೆ ರವಾನೆ ಮಾಡಲಾಗುತ್ತದೆ. ಇಲ್ಲಿ ಈಗಾಗಲೇ ಸಂಗ್ರಹ ಕಾರ್ಯ ಆರಂಭವೂ ಆಗಿದೆ.</p>.<p>ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ, ‘ಮಾಂಸದ ತ್ಯಾಜ್ಯ ವಿಲೇವಾರಿಗೆ ಕಾರ್ಖಾನೆಯವರ ಜೊತೆ ಸಭೆ ನಡೆಸಲಾಗಿದ್ದು,<br />ಮುಂದಿನ ವಾರದಿಂದ ಪೂರ್ಣ ಪ್ರಮಾಣದಲ್ಲಿ ಸಂಗ್ರಹಿಸಲಿದ್ದಾರೆ. ಅವರು ನೀಡುವ ಟ್ರೇಗಳಲ್ಲಿ<br />ಪ್ರತಿ ಗ್ರಾಮ ಪಂಚಾಯಿತಿಯ ನಿರ್ದಿಷ್ಟ ಜಾಗದಲ್ಲಿ ತ್ಯಾಜ್ಯವನ್ನು ಸಂಗ್ರಹಿಸಬೇಕು. ಅಲ್ಲಿಂದ ಅವರು ಸಂಪೂರ್ಣ ಮುಚ್ಚಿದ ಲಾರಿಯಲ್ಲಿ ಸಾಗಿಸಲಿದ್ದಾರೆ. ಇದರಿಂದ ಈ ಭಾಗದಲ್ಲಿ ಮಾಂಸದ ತ್ಯಾಜ್ಯ ವಿಲೇವಾರಿಯೂ ಆಗುತ್ತದೆ. ಕಾರ್ಖಾನೆಗೂ ಬೇಕಾದ ಸಾಮಗ್ರಿ ದೊರೆಯುತ್ತದೆ’ ಎಂದು ಹೇಳಿದರು.</p>.<p>‘ತ್ಯಾಜ್ಯ ಸಾಗಣೆಯ ಖರ್ಚು, ವೆಚ್ಚಗಳನ್ನು ಕಾರ್ಖಾನೆಯವರೇ ಭರಿಸಲಿದ್ದಾರೆ. ಮಾಂಸದಂಗಡಿಗಳು, ಗ್ರಾಮ ಪಂಚಾಯಿತಿ ಮತ್ತು ಅವರೊಂದಿಗೆ ಸಮನ್ವಯ ಸಾಧಿಸಲು ಒಬ್ಬರನ್ನು ಜಿಲ್ಲಾ ಪಂಚಾಯಿತಿಯಿಂದ ನಿಯುಕ್ತಿಗೊಳಿಸಲಾಗಿದೆ. ಅಲ್ಲದೇ ಎಂಟೂ ಗ್ರಾಮಗಳಲ್ಲಿ ತ್ಯಾಜ್ಯ ಸಂಗ್ರಹಿಸಿಡಲು ನಿರ್ದಿಷ್ಟ ಜಾಗವನ್ನು ಗುರುತಿಸಿಕೊಡಲಾಗಿದೆ’ ಎಂದು ವಿವರಿಸಿದರು.</p>.<p class="Subhead"><strong>ಕುರಿ ಮಾಂಸವೂ ವಿಲೇವಾರಿ</strong></p>.<p>‘ಮಂಗಳೂರಿನ ಕಾರ್ಖಾನೆಯವರು ಕೋಳಿ ಮಾಂಸದ ತ್ಯಾಜ್ಯವನ್ನು ಹೆಚ್ಚು ಸಂಗ್ರಹಿಸುತ್ತಾರೆ. ನಮ್ಮ ಜಿಲ್ಲೆಯಿಂದ ಕುರಿ ಮಾಂಸದ ತ್ಯಾಜ್ಯವನ್ನೂ ತೆಗೆದುಕೊಂಡು ಹೋಗಲು ತಿಳಿಸಿದ್ದೇವೆ. ಈ ಬಗ್ಗೆ ಎರಡು ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ’ ಎಂದು ಪ್ರಿಯಾಂಗಾ ಹೇಳಿದರು.</p>.<p>‘ಉಡುಪಿಯಲ್ಲಿ ಮೀನು ತ್ಯಾಜ್ಯ ಸಂಗ್ರಹಿಸುವ ಘಟಕವೊಂದಿದೆ. ಅದಕ್ಕೆ ಜಿಲ್ಲೆಯಿಂದ ರವಾನಿಸುವ ಬಗ್ಗೆ ಮಾತುಕತೆ ನಡೆಸಲು ಚಿಂತಿಸಲಾಗಿದೆ’ ಎಂದೂ ತಿಳಿಸಿದರು.</p>.<p><strong>***</strong></p>.<p>ಜಿಲ್ಲೆಯಲ್ಲಿ ಮಾಂಸದ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲು. ಈ ಯೋಜನೆಯಿಂದ ಕಾರ್ಖಾನೆಗೂ ಸಾಮಗ್ರಿ ದೊರೆಯುತ್ತದೆ. ಜೊತೆಗೆ ಜಿಲ್ಲೆಯ ಸಮಸ್ಯೆಯೂ ಪರಿಹಾರವಾಗುತ್ತದೆ.</p>.<p><strong>– ಪ್ರಿಯಾಂಗಾ, ಜಿ.ಪಂ ಸಿ.ಇ.ಒ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>