<p><strong>ಗೋಕರ್ಣ: </strong>‘ಈ ಕ್ಷೇತ್ರದಲ್ಲಿ ಜನಿಸಿದವರು ಪುಣ್ಯವಂತರು. ಇಲ್ಲಿನ ಮಣ್ಣಿನ ಆಕರ್ಷಣೆಯು ನೂರಾರು ವರ್ಷಗಳಿಂದಲೂ ಜನರನ್ನು ಸೆಳೆಯುತ್ತಲಿದೆ. ಅದನ್ನು ನಾಶ ಮಾಡಿ ಅಭಿವೃದ್ಧಿ ಪಡಿಸುವುದು ಅಭಿವೃದ್ಧಿಯಲ್ಲ’ ಎಂದು ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿತಿನ್ ರಮೇಶ ಗೋಕರ್ಣಅಭಿಪ್ರಾಯಪಟ್ಟರು.</p>.<p>ಇಲ್ಲಿಹಮ್ಮಿಕೊಳ್ಳಲಾಗಿರುವ ಮೂರು ದಿನಗಳ, ‘ಎನ್.ಆರ್.ಜಿ. (ಅನಿವಾಸಿ ಗೋಕರ್ಣ ನಿವಾಸಿಗಳು) ಸಮಾವೇಶ’ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಗೋಕರ್ಣದ ಪ್ರತಿಯೊಂದು ಕೇರಿ, ಓಣಿ, ರಸ್ತೆ, ತೀರ್ಥ, ಪುರಾತನ ದೇವಸ್ಥಾನಗಳು ಪುರಾಣ ಕಾಲದಿಂದಲೂ ತಮ್ಮದೇ ಆದ ಮಹತ್ವವನ್ನು ಸಾರುತ್ತಾ ಬಂದಿವೆ. ಇದು ಅನೇಕ ಗ್ರಂಥ, ನಕ್ಷೆ, ಪುರಾಣಗಳಲ್ಲಿ ಉಲ್ಲೇಖವಾಗಿವೆ. ಸಂಶೋಧನೆಗಳೂ ಈ ಕ್ಷೇತ್ರದ ಬಗ್ಗೆ ಅಗಾಧ ಮಾಹಿತಿ ನೀಡಿವೆ’ ಎಂದು ಹೇಳಿದರು.</p>.<p class="Subhead">‘ಅಭಿವೃದ್ಧಿ ತಂತ್ರಜ್ಞಾನದಂತೆ’:‘ಅಭಿವೃದ್ಧಿ ಎಂದರೆ ಇರುವುದನ್ನು ಅಳಿಸಿ ಹಾಕುವುದಲ್ಲ. ಹಿಂದಿನಿಂದ ಬಂದ ಸಂಸ್ಕೃತಿ, ಆಚಾರ, ವಿಚಾರ ಸಾಂಪ್ರದಾಯಿಕ ಪದ್ಧತಿ, ಧಾರ್ಮಿಕ, ಅಧ್ಯಾತ್ಮಿಕ ಚಿಂತನೆ, ವೇದ, ಪರಂಪರೆಯನ್ನು ಉಳಿಸಿ, ಬೆಳೆಸಿ ರಕ್ಷಿಸುವುದಾಗಿದೆ’ ಎಂದು ನುಡಿದರು.</p>.<p>‘ಅಭಿವೃದ್ಧಿ ಎಂಬುದು ತಂತ್ರಜ್ಞಾನಇದ್ದ ಹಾಗೆ. ಕಾಲಕಾಲಕ್ಕೆ ಮೇಲ್ದರ್ಜೆಗೆ ಏರಿಸಬೇಕಾಗುತ್ತದೆ. ವಾರಾಣಸಿ ಹಾಗೂ ಗೋಕರ್ಣ ಅನೇಕ ವಿಷಯಗಳಲ್ಲಿ ಸಾಮ್ಯತೆ ಹೊಂದಿವೆ. ಹಾಗಾಗಿಯೇ ವಾರಾಣಸಿಯ ಅಭಿವೃದ್ಧಿಗೆ ಗೋಕರ್ಣದವರೇ ನಿಯುಕ್ತಿ ಆಗುವಂತಾಯಿತು’ ಎಂದು ಅವರು ಹೇಳಿದರು.</p>.<p>ಹಿರಿಯ ವೈದ್ಯಡಾ.ಎಸ್.ವಿ.ಜಠಾರ ಮಾತನಾಡಿ, ‘ಪರಿವರ್ತನೆ ಅಭಿವೃದ್ಧಿಯ ಒಂದು ಚಕ್ರ. ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದಲು ನಮ್ಮಲ್ಲಿ ಲಭ್ಯವಿರುವಉಳಿದ ಮಾರ್ಗಗಳನ್ನೂ ಬಳಸಬೇಕು’ ಎಂದರು.</p>.<p>ನಿವೃತ್ತ ಪ್ರಾಚಾರ್ಯಡಾ. ಬಿ.ವಿ.ಮಾರ್ಕಾಂಡೆ ಮಾತನಾಡಿ, ‘ಹಲವರ ಕನಸು ನನಸಾಗಲು ನಾಂದಿ ಹಾಡಿದ ದಿನವಿದು. ತಾಯಿ ಮತ್ತು ತಾಯ್ನೆಲ ಸ್ವರ್ಗಕ್ಕಿಂತಲೂ ಮೇಲು. ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೇಳಿದರು.</p>.<p>ಕ್ಯಾಲಿಫೋರ್ನಿಯಾದಲ್ಲಿ ವೈದ್ಯರಾಗಿರುವ ಡಾ.ಪ್ರಕಾಶ ನಾಯಕ ಮಾತನಾಡಿ, ‘ಅಭಿವೃದ್ಧಿ ಸರ್ವತೋಮುಖವಾಗಿ ಆಗಬೇಕೇ ಹೊರತು ವೈಯಕ್ತಿಕವಾಗಿ ಅಲ್ಲ. ಇಲ್ಲಿಯದ್ದುಹೆಸರಿಗಷ್ಟೇಅಭಿವೃದ್ಧಿ’ ಎಂದು ಅಭಿಪ್ರಾಯಪಟ್ಟರು.</p>.<p>ಸ್ಥಳೀಯ ವಿದ್ವಾಂಸ ಗಣೇಶ ಜೋಗಳೇಕರ್ ಮಾತನಾಡಿ, ವೈದಿಕತೆ, ಆಧ್ಯಾತ್ಮದ ಸಂರಕ್ಷಣೆಯಾದರೆ ಗೋಕರ್ಣದ ಅಭಿವೃದ್ಧಿ ಸಾಧ್ಯ ಎಂದರು.</p>.<p>ಎನ್.ಆರ್.ಜಿ. ಪರಿವಾರದ ಅಧ್ಯಕ್ಷ ವಿಶ್ವನಾಥ ಗೋಕರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗಂಗಾಧರ ಭಟ್ ಕಾರ್ಯಕ್ರಮ ನಿರೂಪಿಸಿದರು. ನಿತಿನ್ ಗೋಕರ್ಣ, ಸುಮಾರು ಒಂದು ಗಂಟೆ ಪರದೆಯ ಮೇಲೆ ಚಿತ್ರಗಳ ಮೂಲಕ ವಾರಾಣಸಿ ಹಾಗೂ ಗೋಕರ್ಣದ ಅಭಿವೃದ್ಧಿಯ ಬಗ್ಗೆ ತಮ್ಮ ಯೋಜನೆಯನ್ನು ವಿವರಿಸಿದರು.</p>.<p>ಅಮೆರಿಕ, ದುಬೈ,ಬ್ರಿಟನ್ಸೇರಿದಂತೆ ವಿವಿಧ ದೇಶಗಳು ಹಾಗೂ ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿರುವ 50ಕ್ಕೂ ಹೆಚ್ಚು ಗೋಕರ್ಣ ನಿವಾಸಿಗಳು ಪ್ರತಿನಿಧಿಗಳಾಗಿ ಈ ಸಮಾವೇಶದಲ್ಲಿಭಾಗವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ: </strong>‘ಈ ಕ್ಷೇತ್ರದಲ್ಲಿ ಜನಿಸಿದವರು ಪುಣ್ಯವಂತರು. ಇಲ್ಲಿನ ಮಣ್ಣಿನ ಆಕರ್ಷಣೆಯು ನೂರಾರು ವರ್ಷಗಳಿಂದಲೂ ಜನರನ್ನು ಸೆಳೆಯುತ್ತಲಿದೆ. ಅದನ್ನು ನಾಶ ಮಾಡಿ ಅಭಿವೃದ್ಧಿ ಪಡಿಸುವುದು ಅಭಿವೃದ್ಧಿಯಲ್ಲ’ ಎಂದು ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿತಿನ್ ರಮೇಶ ಗೋಕರ್ಣಅಭಿಪ್ರಾಯಪಟ್ಟರು.</p>.<p>ಇಲ್ಲಿಹಮ್ಮಿಕೊಳ್ಳಲಾಗಿರುವ ಮೂರು ದಿನಗಳ, ‘ಎನ್.ಆರ್.ಜಿ. (ಅನಿವಾಸಿ ಗೋಕರ್ಣ ನಿವಾಸಿಗಳು) ಸಮಾವೇಶ’ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಗೋಕರ್ಣದ ಪ್ರತಿಯೊಂದು ಕೇರಿ, ಓಣಿ, ರಸ್ತೆ, ತೀರ್ಥ, ಪುರಾತನ ದೇವಸ್ಥಾನಗಳು ಪುರಾಣ ಕಾಲದಿಂದಲೂ ತಮ್ಮದೇ ಆದ ಮಹತ್ವವನ್ನು ಸಾರುತ್ತಾ ಬಂದಿವೆ. ಇದು ಅನೇಕ ಗ್ರಂಥ, ನಕ್ಷೆ, ಪುರಾಣಗಳಲ್ಲಿ ಉಲ್ಲೇಖವಾಗಿವೆ. ಸಂಶೋಧನೆಗಳೂ ಈ ಕ್ಷೇತ್ರದ ಬಗ್ಗೆ ಅಗಾಧ ಮಾಹಿತಿ ನೀಡಿವೆ’ ಎಂದು ಹೇಳಿದರು.</p>.<p class="Subhead">‘ಅಭಿವೃದ್ಧಿ ತಂತ್ರಜ್ಞಾನದಂತೆ’:‘ಅಭಿವೃದ್ಧಿ ಎಂದರೆ ಇರುವುದನ್ನು ಅಳಿಸಿ ಹಾಕುವುದಲ್ಲ. ಹಿಂದಿನಿಂದ ಬಂದ ಸಂಸ್ಕೃತಿ, ಆಚಾರ, ವಿಚಾರ ಸಾಂಪ್ರದಾಯಿಕ ಪದ್ಧತಿ, ಧಾರ್ಮಿಕ, ಅಧ್ಯಾತ್ಮಿಕ ಚಿಂತನೆ, ವೇದ, ಪರಂಪರೆಯನ್ನು ಉಳಿಸಿ, ಬೆಳೆಸಿ ರಕ್ಷಿಸುವುದಾಗಿದೆ’ ಎಂದು ನುಡಿದರು.</p>.<p>‘ಅಭಿವೃದ್ಧಿ ಎಂಬುದು ತಂತ್ರಜ್ಞಾನಇದ್ದ ಹಾಗೆ. ಕಾಲಕಾಲಕ್ಕೆ ಮೇಲ್ದರ್ಜೆಗೆ ಏರಿಸಬೇಕಾಗುತ್ತದೆ. ವಾರಾಣಸಿ ಹಾಗೂ ಗೋಕರ್ಣ ಅನೇಕ ವಿಷಯಗಳಲ್ಲಿ ಸಾಮ್ಯತೆ ಹೊಂದಿವೆ. ಹಾಗಾಗಿಯೇ ವಾರಾಣಸಿಯ ಅಭಿವೃದ್ಧಿಗೆ ಗೋಕರ್ಣದವರೇ ನಿಯುಕ್ತಿ ಆಗುವಂತಾಯಿತು’ ಎಂದು ಅವರು ಹೇಳಿದರು.</p>.<p>ಹಿರಿಯ ವೈದ್ಯಡಾ.ಎಸ್.ವಿ.ಜಠಾರ ಮಾತನಾಡಿ, ‘ಪರಿವರ್ತನೆ ಅಭಿವೃದ್ಧಿಯ ಒಂದು ಚಕ್ರ. ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದಲು ನಮ್ಮಲ್ಲಿ ಲಭ್ಯವಿರುವಉಳಿದ ಮಾರ್ಗಗಳನ್ನೂ ಬಳಸಬೇಕು’ ಎಂದರು.</p>.<p>ನಿವೃತ್ತ ಪ್ರಾಚಾರ್ಯಡಾ. ಬಿ.ವಿ.ಮಾರ್ಕಾಂಡೆ ಮಾತನಾಡಿ, ‘ಹಲವರ ಕನಸು ನನಸಾಗಲು ನಾಂದಿ ಹಾಡಿದ ದಿನವಿದು. ತಾಯಿ ಮತ್ತು ತಾಯ್ನೆಲ ಸ್ವರ್ಗಕ್ಕಿಂತಲೂ ಮೇಲು. ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೇಳಿದರು.</p>.<p>ಕ್ಯಾಲಿಫೋರ್ನಿಯಾದಲ್ಲಿ ವೈದ್ಯರಾಗಿರುವ ಡಾ.ಪ್ರಕಾಶ ನಾಯಕ ಮಾತನಾಡಿ, ‘ಅಭಿವೃದ್ಧಿ ಸರ್ವತೋಮುಖವಾಗಿ ಆಗಬೇಕೇ ಹೊರತು ವೈಯಕ್ತಿಕವಾಗಿ ಅಲ್ಲ. ಇಲ್ಲಿಯದ್ದುಹೆಸರಿಗಷ್ಟೇಅಭಿವೃದ್ಧಿ’ ಎಂದು ಅಭಿಪ್ರಾಯಪಟ್ಟರು.</p>.<p>ಸ್ಥಳೀಯ ವಿದ್ವಾಂಸ ಗಣೇಶ ಜೋಗಳೇಕರ್ ಮಾತನಾಡಿ, ವೈದಿಕತೆ, ಆಧ್ಯಾತ್ಮದ ಸಂರಕ್ಷಣೆಯಾದರೆ ಗೋಕರ್ಣದ ಅಭಿವೃದ್ಧಿ ಸಾಧ್ಯ ಎಂದರು.</p>.<p>ಎನ್.ಆರ್.ಜಿ. ಪರಿವಾರದ ಅಧ್ಯಕ್ಷ ವಿಶ್ವನಾಥ ಗೋಕರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗಂಗಾಧರ ಭಟ್ ಕಾರ್ಯಕ್ರಮ ನಿರೂಪಿಸಿದರು. ನಿತಿನ್ ಗೋಕರ್ಣ, ಸುಮಾರು ಒಂದು ಗಂಟೆ ಪರದೆಯ ಮೇಲೆ ಚಿತ್ರಗಳ ಮೂಲಕ ವಾರಾಣಸಿ ಹಾಗೂ ಗೋಕರ್ಣದ ಅಭಿವೃದ್ಧಿಯ ಬಗ್ಗೆ ತಮ್ಮ ಯೋಜನೆಯನ್ನು ವಿವರಿಸಿದರು.</p>.<p>ಅಮೆರಿಕ, ದುಬೈ,ಬ್ರಿಟನ್ಸೇರಿದಂತೆ ವಿವಿಧ ದೇಶಗಳು ಹಾಗೂ ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿರುವ 50ಕ್ಕೂ ಹೆಚ್ಚು ಗೋಕರ್ಣ ನಿವಾಸಿಗಳು ಪ್ರತಿನಿಧಿಗಳಾಗಿ ಈ ಸಮಾವೇಶದಲ್ಲಿಭಾಗವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>