ಬರ್ಗಲ್ ಗ್ರಾಮದ ನಾಲ್ವರು ರೈತರು ಒಂದೇ ಗದ್ದೆಯಲ್ಲಿ ಸುಮಾರು 9,000 ಭತ್ತದ ಹುಲ್ಲಿನ ಹೊರೆಯ ಬಣವೆ (ಹುಲ್ಲು ಬೊನೆ) ಸಂಗ್ರಹಿಸಿಟ್ಟಿದ್ದರು. ಮಧ್ಯಾಹ್ನ ಬೀಸಿದ ಗಾಳಿಗೆ ಎರಡು ವಿದ್ಯುತ್ ತಂತಿಗಳು ಪರಸ್ಪರ ಸ್ಪರ್ಶಿಸಿ ಕಿಡಿಗಳು ಕಾಣಿಸಿಕೊಂಡವು. ಅವು ಹುಲ್ಲಿಗೆ ಬಿದ್ದು ಬೆಂಕಿ ಹೊತ್ತಿಕೊಂಡಿತು. ಅವಘಡದಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.