ಆದರೆ, ಎರಡು ವರ್ಷ ಕಳೆದರೂ ಇನ್ನೂ ಕಟ್ಟಡ ಅರೆಬರೆಯ ಸ್ಥಿತಿಯಲ್ಲಿದೆ. ಪ್ರತಿ ಮನೆಗೆ ಹಾಲ್, ಅಡುಗೆ ಮನೆ, ಒಂದು ಕೊಠಡಿ, ಶೌಚಾಲಯ ನಿರ್ಮಿಸಲಾಗಿದೆ. ಕಟ್ಟಡದ ಕಾಂಕ್ರೀಟ್ ಕೆಲಸ ಮಾತ್ರ ಆಗಿದ್ದು, ಇನ್ನುಳಿದ ಕಾಮಗಾರಿ ಆಗಬೇಕಾಗಿದೆ. ‘ಗೃಹ ಭಾಗ್ಯ ಯೋಜನೆಯಡಿ ಒಬ್ಬ ಪೌರಕಾರ್ಮಿಕರಿಗೆ ₹ 7.5 ಲಕ್ಷದಂತೆ, ಆರು ಮನೆಗಳಿಗೆ ಅನುದಾನ ನಿಗದಿಪಡಿಸಲಾಗಿತ್ತು. ಆದರೆ, ಯೋಜನೆ ರೂಪಿಸಿದವರು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಟ್ಟಡ ಪೂರ್ಣಗೊಳ್ಳಲು ಹೆಚ್ಚುವರಿಯಾಗಿ ₹ 25 ಲಕ್ಷ ಅನುದಾನ ಬೇಕಾಗಿದೆ. ಈ ಪ್ರಸ್ತಾವವನ್ನು ಇಲಾಖೆಗೆ ಕಳುಹಿಸಲಾಗಿದೆ’ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.