<p><strong>ಶಿರಸಿ: </strong>ನಿತ್ಯ ನಸುಕಿನಲ್ಲಿ ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ಕೈಗೆತ್ತಿಕೊಂಡಿದ್ದ ವಸತಿ ಗೃಹ ನಿರ್ಮಾಣ ಕುಂಟುತ್ತ ಸಾಗಿದೆ. ಪೌರ ಕಾರ್ಮಿಕರಿಗೆ ಸೂರು ಮರೀಚಿಕೆಯಾಗಿದೆ.</p>.<p>ಗೃಹ ಭಾಗ್ಯ ಯೋಜನೆಯಡಿ ಮೊದಲ ಹಂತದಲ್ಲಿ ಆರು ವಸತಿ ಗೃಹ ನಿರ್ಮಾಣಕ್ಕೆ ನಗರಸಭೆ ₹ 45 ಲಕ್ಷ ನಿಗದಿಪಡಿಸಿತ್ತು. 2017ರ ಅಕ್ಟೋಬರ್ನಲ್ಲಿ ಇಲ್ಲಿನ ಮರಾಠಿಕೊಪ್ಪದಲ್ಲಿ ಕಾಮಗಾರಿಯ ಗುದ್ದಲಿ ಪೂಜೆ ನಡೆಸಿ, ಕಟ್ಟಡ ಪೂರ್ಣಗೊಳ್ಳಲು ಮಳೆಗಾಲ ಹೊರತುಪಡಿಸಿ, ಒಂಬತ್ತು ತಿಂಗಳುಗಳ ಕಾಲಾವಕಾಶವನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು.</p>.<p>ಆದರೆ, ಎರಡು ವರ್ಷ ಕಳೆದರೂ ಇನ್ನೂ ಕಟ್ಟಡ ಅರೆಬರೆಯ ಸ್ಥಿತಿಯಲ್ಲಿದೆ. ಪ್ರತಿ ಮನೆಗೆ ಹಾಲ್, ಅಡುಗೆ ಮನೆ, ಒಂದು ಕೊಠಡಿ, ಶೌಚಾಲಯ ನಿರ್ಮಿಸಲಾಗಿದೆ. ಕಟ್ಟಡದ ಕಾಂಕ್ರೀಟ್ ಕೆಲಸ ಮಾತ್ರ ಆಗಿದ್ದು, ಇನ್ನುಳಿದ ಕಾಮಗಾರಿ ಆಗಬೇಕಾಗಿದೆ. ‘ಗೃಹ ಭಾಗ್ಯ ಯೋಜನೆಯಡಿ ಒಬ್ಬ ಪೌರಕಾರ್ಮಿಕರಿಗೆ ₹ 7.5 ಲಕ್ಷದಂತೆ, ಆರು ಮನೆಗಳಿಗೆ ಅನುದಾನ ನಿಗದಿಪಡಿಸಲಾಗಿತ್ತು. ಆದರೆ, ಯೋಜನೆ ರೂಪಿಸಿದವರು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಟ್ಟಡ ಪೂರ್ಣಗೊಳ್ಳಲು ಹೆಚ್ಚುವರಿಯಾಗಿ ₹ 25 ಲಕ್ಷ ಅನುದಾನ ಬೇಕಾಗಿದೆ. ಈ ಪ್ರಸ್ತಾವವನ್ನು ಇಲಾಖೆಗೆ ಕಳುಹಿಸಲಾಗಿದೆ’ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.</p>.<p>‘ಪೌರ ಕಾರ್ಮಿಕರಿಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ವಸತಿಗೃಹ ಯೋಜನೆ ಶಿರಸಿಯಲ್ಲಿ ಅನುಷ್ಠಾನಗೊಂಡಿತ್ತು. ಇದರ ಗುದ್ದಲಿ ಪೂಜೆ ನಡೆದ ನಂತರ ಕಾರವಾರದಲ್ಲಿ ಕಾಮಗಾರಿ ಶುರುವಾಗಿದ್ದರೂ, ಅಲ್ಲಿನ ಕಟ್ಟಡ ಪೂರ್ಣಗೊಂಡು, ಪೌರ ಕಾರ್ಮಿಕರಿಗೆ ಅದನ್ನು ಹಸ್ತಾಂತರಿಸಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಆರೋಪಿಸಿದರು.</p>.<p>‘ಕಾಮಗಾರಿಯನ್ನು ಇ–ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿತ್ತು. ನಿಗದಿತ ಮೊತ್ತದಲ್ಲಿ ಕಟ್ಟಡ ಪೂರ್ಣಗೊಂಡಿಲ್ಲ. ಹೆಚ್ಚುವರಿ ಮೊತ್ತದ ಬೇಡಿಕೆ ಇಟ್ಟಿದ್ದು, ಶೀಘ್ರ ಕಟ್ಟಡ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಎಲ್ಲ ಪೌರ ಕಾರ್ಮಿಕರಿಗೂ ವಸತಿ ಒದಗಿಸುವ ಉದ್ದೇಶದಿಂದ ₹ 2.32 ಕೋಟಿ ವೆಚ್ಚದ ಮತ್ತೊಂದು ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಪೌರಾಯುಕ್ತ ರಮೇಶ ನಾಯಕ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>ನಿತ್ಯ ನಸುಕಿನಲ್ಲಿ ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ಕೈಗೆತ್ತಿಕೊಂಡಿದ್ದ ವಸತಿ ಗೃಹ ನಿರ್ಮಾಣ ಕುಂಟುತ್ತ ಸಾಗಿದೆ. ಪೌರ ಕಾರ್ಮಿಕರಿಗೆ ಸೂರು ಮರೀಚಿಕೆಯಾಗಿದೆ.</p>.<p>ಗೃಹ ಭಾಗ್ಯ ಯೋಜನೆಯಡಿ ಮೊದಲ ಹಂತದಲ್ಲಿ ಆರು ವಸತಿ ಗೃಹ ನಿರ್ಮಾಣಕ್ಕೆ ನಗರಸಭೆ ₹ 45 ಲಕ್ಷ ನಿಗದಿಪಡಿಸಿತ್ತು. 2017ರ ಅಕ್ಟೋಬರ್ನಲ್ಲಿ ಇಲ್ಲಿನ ಮರಾಠಿಕೊಪ್ಪದಲ್ಲಿ ಕಾಮಗಾರಿಯ ಗುದ್ದಲಿ ಪೂಜೆ ನಡೆಸಿ, ಕಟ್ಟಡ ಪೂರ್ಣಗೊಳ್ಳಲು ಮಳೆಗಾಲ ಹೊರತುಪಡಿಸಿ, ಒಂಬತ್ತು ತಿಂಗಳುಗಳ ಕಾಲಾವಕಾಶವನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು.</p>.<p>ಆದರೆ, ಎರಡು ವರ್ಷ ಕಳೆದರೂ ಇನ್ನೂ ಕಟ್ಟಡ ಅರೆಬರೆಯ ಸ್ಥಿತಿಯಲ್ಲಿದೆ. ಪ್ರತಿ ಮನೆಗೆ ಹಾಲ್, ಅಡುಗೆ ಮನೆ, ಒಂದು ಕೊಠಡಿ, ಶೌಚಾಲಯ ನಿರ್ಮಿಸಲಾಗಿದೆ. ಕಟ್ಟಡದ ಕಾಂಕ್ರೀಟ್ ಕೆಲಸ ಮಾತ್ರ ಆಗಿದ್ದು, ಇನ್ನುಳಿದ ಕಾಮಗಾರಿ ಆಗಬೇಕಾಗಿದೆ. ‘ಗೃಹ ಭಾಗ್ಯ ಯೋಜನೆಯಡಿ ಒಬ್ಬ ಪೌರಕಾರ್ಮಿಕರಿಗೆ ₹ 7.5 ಲಕ್ಷದಂತೆ, ಆರು ಮನೆಗಳಿಗೆ ಅನುದಾನ ನಿಗದಿಪಡಿಸಲಾಗಿತ್ತು. ಆದರೆ, ಯೋಜನೆ ರೂಪಿಸಿದವರು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಟ್ಟಡ ಪೂರ್ಣಗೊಳ್ಳಲು ಹೆಚ್ಚುವರಿಯಾಗಿ ₹ 25 ಲಕ್ಷ ಅನುದಾನ ಬೇಕಾಗಿದೆ. ಈ ಪ್ರಸ್ತಾವವನ್ನು ಇಲಾಖೆಗೆ ಕಳುಹಿಸಲಾಗಿದೆ’ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.</p>.<p>‘ಪೌರ ಕಾರ್ಮಿಕರಿಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ವಸತಿಗೃಹ ಯೋಜನೆ ಶಿರಸಿಯಲ್ಲಿ ಅನುಷ್ಠಾನಗೊಂಡಿತ್ತು. ಇದರ ಗುದ್ದಲಿ ಪೂಜೆ ನಡೆದ ನಂತರ ಕಾರವಾರದಲ್ಲಿ ಕಾಮಗಾರಿ ಶುರುವಾಗಿದ್ದರೂ, ಅಲ್ಲಿನ ಕಟ್ಟಡ ಪೂರ್ಣಗೊಂಡು, ಪೌರ ಕಾರ್ಮಿಕರಿಗೆ ಅದನ್ನು ಹಸ್ತಾಂತರಿಸಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಆರೋಪಿಸಿದರು.</p>.<p>‘ಕಾಮಗಾರಿಯನ್ನು ಇ–ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿತ್ತು. ನಿಗದಿತ ಮೊತ್ತದಲ್ಲಿ ಕಟ್ಟಡ ಪೂರ್ಣಗೊಂಡಿಲ್ಲ. ಹೆಚ್ಚುವರಿ ಮೊತ್ತದ ಬೇಡಿಕೆ ಇಟ್ಟಿದ್ದು, ಶೀಘ್ರ ಕಟ್ಟಡ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಎಲ್ಲ ಪೌರ ಕಾರ್ಮಿಕರಿಗೂ ವಸತಿ ಒದಗಿಸುವ ಉದ್ದೇಶದಿಂದ ₹ 2.32 ಕೋಟಿ ವೆಚ್ಚದ ಮತ್ತೊಂದು ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಪೌರಾಯುಕ್ತ ರಮೇಶ ನಾಯಕ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>