ದೇವಸ್ಥಾನದ ಆಚಾರ್ಯರ ನೇತೃತ್ವದಲ್ಲಿ ಬೆಳಿಗ್ಗೆ 10.07ಕ್ಕೆ ದೇವಿಯ ಪ್ರತಿಷ್ಠಾ ಮಂಟಪ ಕಳಚಲಾಯಿತು. ದೇವಿ ಆಸೀನಳಾದ ಪೀಠದ ಸುತ್ತಲಿನ ಅಲಂಕೃತ ಸಾಮಗ್ರಿಗಳನ್ನು ತೆರವುಗೊಳಿಸುವುದರೊಂದಿಗೆ ಜಾತ್ರೆಯ ಸಿದ್ಧತೆಗೆ ಅಧಿಕೃತ ಮುದ್ರೆ ಒತ್ತಲಾಯಿತು. ಈ ವೇಳೆ ದೇವಸ್ಥಾನದ ಧರ್ಮದರ್ಶಿ ಮಂಡಳದವರು, ಬಾಬುದಾರರು, ಸಿಬ್ಬಂದಿ ಇದ್ದರು.