ಈ ಕಾರ್ಯ ಚಟುವಟಿಕೆಯ ಮುಂಚೂಣಿಯಲ್ಲಿರುವ ಸಿ.ಎಸ್.ಗೌಡರ್, ಸುಮಾರು 15–20 ವರ್ಷಗಳ ಹಿಂದೆಯೇ ಮಳೆ ನೀರು ಮರುಪೂರಣ ವ್ಯವಸ್ಥೆಯನ್ನು ತಮ್ಮ ಮನೆಯಲ್ಲಿ ರೂಪಿಸಿದ್ದಾರೆ. ಸ್ಥಳೀಯ ತಾಲ್ಲೂಕು ಪಂಚಾಯ್ತಿಯಲ್ಲಿ ಅಧಿಕಾರಿ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ಅವರು ಅಭಿವೃದ್ಧಿ ಅಧಿಕಾರಿಯಾಗಿದ್ದರು. ಪಟ್ಟಣದ ಎ.ಪಿ.ಎಂ.ಸಿ ಸಮೀಪದ ಇಂದಿರಾ ನಗರದಲ್ಲಿರುವ ತಮ್ಮ ಮನೆಯ ಪ್ರತಿ ಚಾವಣಿಯ ನೀರು ಪೈಪ್ಗಳ ಮೂಲಕ ಕೆಳಗೆ ಬರುವಂತೆ ಮಾಡಿದ್ದಾರೆ. ಆ ನೀರನ್ನು ಬಾವಿಯ ಸುತ್ತಲಿನ ಗುಂಡಿಯಲ್ಲಿ ಹರಿಸಿ, ನೀರು ನೆಲದಲ್ಲಿ ಇಂಗುವಂತೆ ಮಾಡಿದ್ದಾರೆ. ಇದಕ್ಕೆ ಆ ಸಂದರ್ಭದಲ್ಲಿ ಸುಮಾರು₹ 10 ಸಾವಿರ ವೆಚ್ಚವಾಗಿದೆ.