<p><strong>ಕಾರವಾರ</strong>: ತಾಲ್ಲೂಕಿನ ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಿವಾಡದಲ್ಲಿ ಕಾಳಿ ನದಿಯಿಂದ ಉಪ್ಪು ನೀರು ನುಗ್ಗದಂತೆ ಬಾಂದಾರಕ್ಕೆ ಈಚೆಗೆ ಹಲಗೆಗಳನ್ನು ಅಳವಡಿಸಲಾಗಿದೆ. ಆದರೆ, ಆ ಕಾಮಗಾರಿಯು ಸಮರ್ಪಕವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.</p>.<p>ಕಾಳಿ ನದಿಯ ಮೂಲಕ ಸಮುದ್ರದ ಉಪ್ಪು ನೀರು ಸಮೀಪದ ಜಮೀನಿಗೆ ನುಗ್ಗುತ್ತಿದೆ. ಅದರಿಂದಾಗಿ, ಊರಿನಲ್ಲಿರುವ ಕುಡಿಯುವ ನೀರಿನ 20 ಬಾವಿಗಳ ನೀರು ಹಾಳಾಗಿದ್ದು, ಬಳಕೆ ಯೋಗ್ಯವಾಗಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮಾರ್ಚ್ 22ರಂದು ‘ಉಪ್ಪು ನೀರಿನಿಂದ ಕಂಗೆಟ್ಟ ಅಂಬಿಗವಾಡ’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು.</p>.<p>ಈ ನಡುವೆ, ಸಣ್ಣ ನೀರಾವರಿ ಇಲಾಖೆಯಿಂದ ಬಾಂದಾರದ ಗೇಟ್ಗಳಿಗೆ ಎರಡು ಹಲಗೆಗಳನ್ನು ಅಳವಡಿಸಲಾಗಿದೆ. ಆದರೆ, ಕಾಮಗಾರಿ ಸೂಕ್ತ ರೀತಿಯಲ್ಲಿ ಆಗದ ಕಾರಣ ಉಪ್ಪು ನೀರು ಒಳಗೆ ಹರಿಯುತ್ತಿದೆ. ಇದರಿಂದ ಊರಿನ ಸಮಸ್ಯೆ ಬಗೆ ಹರಿದಿಲ್ಲ ಎಂದು ಗ್ರಾಮಸ್ಥ ಜಗದೀಶ ಹೇಳಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/district/uthara-kannada/ambiwada-in-karwar-talluk-suffers-from-saline-water-815587.html" target="_blank">ಕಾರವಾರ: ಉಪ್ಪು ನೀರಿನಿಂದ ಕಂಗೆಟ್ಟ ಅಂಬೀವಾಡ</a></p>.<p>ಈ ಬಗ್ಗೆ ಗ್ರಾಮಸ್ಥರು ಸಭೆ ನಡೆಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು. ಅಂಬಿಗವಾಡ, ಪಾಟ್ಲೊವಾಡ ಮತ್ತು ಬಾಬು ನಾಯ್ಕವಾಡದಲ್ಲಿ 35ಕ್ಕೂ ಹೆಚ್ಚು ಮನೆಗಳಿವೆ. ಬಹುತೇಕ ಎಲ್ಲರ ಮನೆಗಳಲ್ಲೂ ಬಾವಿಗಳಿದ್ದರೂ ಡಿಸೆಂಬರ್ ತಿಂಗಳಿನಿಂದ ಉಪ್ಪು ನೀರು ತುಂಬಿಕೊಳ್ಳುತ್ತಿದೆ. ಈ ಊರಿಗೆ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರಿನ ಪ್ರತ್ಯೇಕ ಯೋಜನೆಯೂ ಇಲ್ಲ. ಆದ್ದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.</p>.<p>ಈ ಕಾಮಗಾರಿಯನ್ನು ಪರಿಶೀಲಿಸಿ, ಬಾಂದಾರ ದುರಸ್ತಿ ಮಾಡಿಸಿಕೊಡಬೇಕು. ಊರಿನೊಳಗೆ ಉಪ್ಪು ನೀರು ಬರುವುದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ತಾಲ್ಲೂಕಿನ ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಿವಾಡದಲ್ಲಿ ಕಾಳಿ ನದಿಯಿಂದ ಉಪ್ಪು ನೀರು ನುಗ್ಗದಂತೆ ಬಾಂದಾರಕ್ಕೆ ಈಚೆಗೆ ಹಲಗೆಗಳನ್ನು ಅಳವಡಿಸಲಾಗಿದೆ. ಆದರೆ, ಆ ಕಾಮಗಾರಿಯು ಸಮರ್ಪಕವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.</p>.<p>ಕಾಳಿ ನದಿಯ ಮೂಲಕ ಸಮುದ್ರದ ಉಪ್ಪು ನೀರು ಸಮೀಪದ ಜಮೀನಿಗೆ ನುಗ್ಗುತ್ತಿದೆ. ಅದರಿಂದಾಗಿ, ಊರಿನಲ್ಲಿರುವ ಕುಡಿಯುವ ನೀರಿನ 20 ಬಾವಿಗಳ ನೀರು ಹಾಳಾಗಿದ್ದು, ಬಳಕೆ ಯೋಗ್ಯವಾಗಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮಾರ್ಚ್ 22ರಂದು ‘ಉಪ್ಪು ನೀರಿನಿಂದ ಕಂಗೆಟ್ಟ ಅಂಬಿಗವಾಡ’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು.</p>.<p>ಈ ನಡುವೆ, ಸಣ್ಣ ನೀರಾವರಿ ಇಲಾಖೆಯಿಂದ ಬಾಂದಾರದ ಗೇಟ್ಗಳಿಗೆ ಎರಡು ಹಲಗೆಗಳನ್ನು ಅಳವಡಿಸಲಾಗಿದೆ. ಆದರೆ, ಕಾಮಗಾರಿ ಸೂಕ್ತ ರೀತಿಯಲ್ಲಿ ಆಗದ ಕಾರಣ ಉಪ್ಪು ನೀರು ಒಳಗೆ ಹರಿಯುತ್ತಿದೆ. ಇದರಿಂದ ಊರಿನ ಸಮಸ್ಯೆ ಬಗೆ ಹರಿದಿಲ್ಲ ಎಂದು ಗ್ರಾಮಸ್ಥ ಜಗದೀಶ ಹೇಳಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/district/uthara-kannada/ambiwada-in-karwar-talluk-suffers-from-saline-water-815587.html" target="_blank">ಕಾರವಾರ: ಉಪ್ಪು ನೀರಿನಿಂದ ಕಂಗೆಟ್ಟ ಅಂಬೀವಾಡ</a></p>.<p>ಈ ಬಗ್ಗೆ ಗ್ರಾಮಸ್ಥರು ಸಭೆ ನಡೆಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು. ಅಂಬಿಗವಾಡ, ಪಾಟ್ಲೊವಾಡ ಮತ್ತು ಬಾಬು ನಾಯ್ಕವಾಡದಲ್ಲಿ 35ಕ್ಕೂ ಹೆಚ್ಚು ಮನೆಗಳಿವೆ. ಬಹುತೇಕ ಎಲ್ಲರ ಮನೆಗಳಲ್ಲೂ ಬಾವಿಗಳಿದ್ದರೂ ಡಿಸೆಂಬರ್ ತಿಂಗಳಿನಿಂದ ಉಪ್ಪು ನೀರು ತುಂಬಿಕೊಳ್ಳುತ್ತಿದೆ. ಈ ಊರಿಗೆ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರಿನ ಪ್ರತ್ಯೇಕ ಯೋಜನೆಯೂ ಇಲ್ಲ. ಆದ್ದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.</p>.<p>ಈ ಕಾಮಗಾರಿಯನ್ನು ಪರಿಶೀಲಿಸಿ, ಬಾಂದಾರ ದುರಸ್ತಿ ಮಾಡಿಸಿಕೊಡಬೇಕು. ಊರಿನೊಳಗೆ ಉಪ್ಪು ನೀರು ಬರುವುದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>