<p><strong>ಶಿರಸಿ:</strong>ಇತಿಹಾಸ ತಜ್ಞ ಡಾ.ಎ.ಕೆ. ಶಾಸ್ತ್ರಿ (80) ಹೃದಯಾಘಾತದಿಂದ ಶನಿವಾರ ನಿಧನರಾದರು. ಮೋಡಿ ಲಿಪಿಯಲ್ಲಿರುವ ಕಡತಗಳ ಮೇಲೆ ಅಧ್ಯಯನ ನಡೆಸಿದ್ದ ಅವರು 'ಕಡತ ಶಾಸ್ತ್ರಿ' ಎಂದೇ ಪ್ರಸಿದ್ಧರಾಗಿದ್ದರು.ಇಬ್ಬರು ಪುತ್ರರು ಇದ್ದಾರೆ.</p>.<p>15ನೇ ಶತಮಾನದಿಂದ 19ನೇ ಶತಮಾನದವರೆಗಿನ ಕಡತಗಳ ಮೇಲೆ ಅವರು ಅಧ್ಯಯನ ಮಾಡಿದ್ದರು. ಇತಿಹಾಸದ ಮೇಲೆ ಅನೇಕ ಮೌಲಿಕ ಕೃತಿಗಳನ್ನು ರಚಿಸಿದ್ದರು. ಶೃಂಗೇರಿ ಮಠದ ದಾಖಲೆಗಳ ಮೇಲೆ ವಿಶೇಷ ಅಧ್ಯಯನ ಮಾಡಿ ಪುಸ್ತಕ ಪ್ರಕಟಿಸಿದ್ದರು.</p>.<p>ಶಿರಸಿಯ ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿಯಾದ ನಂತರ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಚುಟುಕು ಬರವಣಿಗೆ ಅವರ ಹವ್ಯಾಸವಾಗಿತ್ತು.</p>.<p>ಇಲ್ಲಿನ ನಾವು- ನೀವು ಬಳಗದ ಸದಸ್ಯರಾಗಿದ್ದ ಅವರು, ಜ.1ರಂದು ನೆಮ್ಮದಿ ಕುಟೀರದಲ್ಲಿ ನಡೆದ ಮಾಸದ ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<p>‘ಕಾರ್ಯಕ್ರಮ ಮುಗಿದ ಮೇಲೆ ನೆಮ್ಮದಿ ಕಾರ್ಯಕ್ರಮಗಳಿಗೆ ₹5000 ಚೆಕ್ ಕೊಟ್ಟರು. ತಕ್ಷಣವೇ ಅದನ್ನು ವಾಪಸ್ ಪಡೆದು, ಪಕ್ಕದಲ್ಲಿರುವ ರುದ್ರಭೂಮಿ ಅಭಿವೃದ್ಧಿಗೂ ಇರಲಿ ಎಂದು ಹೊಸ ಚೆಕ್ನಲ್ಲಿ ಹೆಚ್ಚಿನ ಮೊತ್ತ ಬರೆದು ಕೊಟ್ಟರು’ಎಂದು ಬಳಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಿ.ಪಿ.ಹೆಗಡೆ ವೈಶಾಲಿ ನೆನಪಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong>ಇತಿಹಾಸ ತಜ್ಞ ಡಾ.ಎ.ಕೆ. ಶಾಸ್ತ್ರಿ (80) ಹೃದಯಾಘಾತದಿಂದ ಶನಿವಾರ ನಿಧನರಾದರು. ಮೋಡಿ ಲಿಪಿಯಲ್ಲಿರುವ ಕಡತಗಳ ಮೇಲೆ ಅಧ್ಯಯನ ನಡೆಸಿದ್ದ ಅವರು 'ಕಡತ ಶಾಸ್ತ್ರಿ' ಎಂದೇ ಪ್ರಸಿದ್ಧರಾಗಿದ್ದರು.ಇಬ್ಬರು ಪುತ್ರರು ಇದ್ದಾರೆ.</p>.<p>15ನೇ ಶತಮಾನದಿಂದ 19ನೇ ಶತಮಾನದವರೆಗಿನ ಕಡತಗಳ ಮೇಲೆ ಅವರು ಅಧ್ಯಯನ ಮಾಡಿದ್ದರು. ಇತಿಹಾಸದ ಮೇಲೆ ಅನೇಕ ಮೌಲಿಕ ಕೃತಿಗಳನ್ನು ರಚಿಸಿದ್ದರು. ಶೃಂಗೇರಿ ಮಠದ ದಾಖಲೆಗಳ ಮೇಲೆ ವಿಶೇಷ ಅಧ್ಯಯನ ಮಾಡಿ ಪುಸ್ತಕ ಪ್ರಕಟಿಸಿದ್ದರು.</p>.<p>ಶಿರಸಿಯ ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿಯಾದ ನಂತರ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಚುಟುಕು ಬರವಣಿಗೆ ಅವರ ಹವ್ಯಾಸವಾಗಿತ್ತು.</p>.<p>ಇಲ್ಲಿನ ನಾವು- ನೀವು ಬಳಗದ ಸದಸ್ಯರಾಗಿದ್ದ ಅವರು, ಜ.1ರಂದು ನೆಮ್ಮದಿ ಕುಟೀರದಲ್ಲಿ ನಡೆದ ಮಾಸದ ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<p>‘ಕಾರ್ಯಕ್ರಮ ಮುಗಿದ ಮೇಲೆ ನೆಮ್ಮದಿ ಕಾರ್ಯಕ್ರಮಗಳಿಗೆ ₹5000 ಚೆಕ್ ಕೊಟ್ಟರು. ತಕ್ಷಣವೇ ಅದನ್ನು ವಾಪಸ್ ಪಡೆದು, ಪಕ್ಕದಲ್ಲಿರುವ ರುದ್ರಭೂಮಿ ಅಭಿವೃದ್ಧಿಗೂ ಇರಲಿ ಎಂದು ಹೊಸ ಚೆಕ್ನಲ್ಲಿ ಹೆಚ್ಚಿನ ಮೊತ್ತ ಬರೆದು ಕೊಟ್ಟರು’ಎಂದು ಬಳಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಿ.ಪಿ.ಹೆಗಡೆ ವೈಶಾಲಿ ನೆನಪಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>