ಸ್ವಂತ ಖರ್ಚಿನಲ್ಲಿ ಪ್ರಚಾರ:ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸ್ವಂತ ಖರ್ಚಿನಲ್ಲಿ ಶಿಗ್ಗಾವಿ, ಬಂಕಾಪುರ, ಸವಣೂರು, ಯಲ್ಲಾಪುರ, ಶಿರಸಿ, ಕಿರವತ್ತಿ, ಕಲಘಟಗಿ, ಹಾನಗಲ್ ಸೇರಿದಂತೆ ಇತರೆಡೆ ತೆರಳಿ, ದಾಖಲಾತಿಯ ಪ್ರಚಾರ ಮಾಡಿದ್ದಾರೆ. ಕೆಲವು ಪ್ರೌಢಶಾಲೆಗಳಿಗೆ ತೆರಳಿ ಭಿತ್ತಿಪತ್ರ ನೀಡಿದ್ದಾರೆ. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂದೇಶವಿರುವ ವಿಡಿಯೊ ಮಾಡಿ, ಸಾಮಾಜಿಕ ತಾಣದಲ್ಲಿಯೂ ಪ್ರಚಾರ ಮಾಡಿದ್ದಾರೆ.