ಖಾಸಗಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಗೆ ₹ 1.5 ಲಕ್ಷದಷ್ಟು ವೆಚ್ಚವಾಗುತ್ತಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಡಾ. ಗಜಾನನ ಭಟ್ಟ ನೇತೃತ್ವದಲ್ಲಿ ವೈದ್ಯರಾದ ವಿಶ್ವನಾಥ ರೇವಣಕರ್, ಬಸನಗೌಡ, ಪದ್ಮಿನಿ ಪೈ, ಶುಶ್ರೂಷಕರಾದ ಜಾಯ್ ಬೆರೆಟ್ಟೊ, ಸುಜಾತಾ, ಸಿಬ್ಬಂದಿ ನರಸಿಂಹ ಅವರು ಶಸ್ತ್ರಚಿಕಿತ್ಸೆಗೆ ನೆರವಾದರು.