ವರ್ಷದ ಎಲ್ಲಾ ಕಾಲದಲ್ಲಿಯೂ ಸಂಚಾರದಲ್ಲಿಯೇ ಇರಬೇಕಾದ ಪರಿವ್ರಾಜಕರು ಚಾತುರ್ಮಾಸ್ಯದ ಈ ನಾಲ್ಕು ಪಕ್ಷಗಳ ಕಾಲ ಸಂಚರಿಸುವಂತಿಲ್ಲ. ‘ಯತಿಶ್ರೇಷ್ಠರು ಚಾತುರ್ಮಾಸ್ಯ ಮಾಡುವ ಸಮಯವೆಂದರೆ ಅದು ಸಾಮಾನ್ಯವಲ್ಲ. ಆ ಸ್ಥಳದಲ್ಲಿ ದೇವಾನುದೇವತೆಗಳ ಸಾನ್ನಿಧ್ಯವಿರುತ್ತದೆ. ಅದರಿಂದ ಸಮಸ್ತ ಜನರ ಕಲ್ಯಾಣವಾಗುತ್ತದೆ. ಅಲ್ಲಿ ಧಾರ್ಮಿಕ ಪ್ರಭಾವ ಹೆಚ್ಚುತ್ತದೆ’ ಎಂದು ಆಸ್ಥಾನ ವಿದ್ವಾಂಸ ಬಾಲಚಂದ್ರ ಶಾಸ್ತ್ರಿ ತಿಳಿಸಿದರು. ಕೊರೊನಾ ಸೋಂಕು ಇರುವ ಕಾರಣಕ್ಕೆ ಎಲ್ಲ ಶಿಷ್ಯರೂ ಮನೆಯಲ್ಲಿಯೇ ಇದ್ದು, ತಮ್ಮಿಂದಾದ ಸೇವೆ ಸಲ್ಲಿಸಿ, ವ್ರತನಿರತ ಸ್ವಾಮಿಗಳ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದರು. ಅತಿ ಅವಶ್ಯವಿರುವ ಕೆಲವೇ ಕೆಲವು ಮಠದ ಪ್ರಮುಖರ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಿದವು.