ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ಭಾಗವಾಗಿ ಇಲ್ಲಿ ಫ್ಲೈಓವರ್ ನಿರ್ಮಾಣವಾಗುತ್ತಿದೆ. ಇದಕ್ಕಾಗಿ, ಈ ಹಿಂದೆ ಕಡಲತೀರದಲ್ಲಿದ್ದ ಪ್ರವೇಶ ದ್ವಾರ, ಸಮೀಪದಲ್ಲಿದ್ದ ರವೀಂದ್ರನಾಥ ಟ್ಯಾಗೋರ್ ಅವರ ಕಂಚಿನ ಪ್ರತಿಮೆಯನ್ನು ತೆರವು ಮಾಡಲಾಗಿತ್ತು. ಈಗ ಹೆದ್ದಾರಿಯ ಇಕ್ಕೆಲಗಳಲ್ಲಿ ಮಣ್ಣು, ಅರ್ಧ ನಿರ್ಮಾಣವಾದ ಫ್ಲೈ ಓವರ್ ಮತ್ತು ಅದರ ಕಂಬಗಳು ಈ ಪ್ರದೇಶದ ಸೌಂದರ್ಯ ಕಡಿಮೆ ಮಾಡಿವೆ.