ಶುಕ್ರವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಾತ್ರೆ ಮುಗಿದಿದ್ದರೂ ಇನ್ನೂ ಹೊಸ ಬಸ್ ನಿಲ್ದಾಣದಿಂದ ಬಸ್ಗಳು ಹೊರಡುತ್ತಿವೆ. ಇದನ್ನು ಮುಂದುವರಿಸಿ, ಹಳೇ ಬಸ್ ನಿಲ್ದಾಣದ ಕಟ್ಟಡ ತೆರವು ಮಾಡಬಹುದು. ಒಂದೊಮ್ಮೆ ಬಸ್ ನಿಲ್ದಾಣ ಇಲ್ಲಿಗೆ ಮತ್ತೆ ಸ್ಥಳಾಂತರಗೊಂಡರೆ, ಕಟ್ಟಡ ತೆರವುಗೊಳಿಸುವುದು ಕಷ್ಟವಾಗುತ್ತದೆ’ ಎಂದರು.