ತೌತೆ ಚಂಡಮಾರುತದಿಂದ ಸಮುದ್ರದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಅಲೆಗಳು ವೇಗವಾಗಿ ಅಪ್ಪಳಿಸಿದ ಪರಿಣಾಮ ತಾತ್ಕಾಲಿಕ ತಡೆಗೋಡೆಯು ನೆಲಸಮವಾಗಿತ್ತು. ಕಡಲ್ಕೊರೆತದ ಗಂಭೀರ ಸಮಸ್ಯೆ ಕುರಿತು, ‘ಪ್ರಜಾವಾಣಿ’ಯ ಮೇ 16ರ ಸಂಚಿಕೆಯಲ್ಲಿ ‘ಕಡಲ್ಕೊರೆತ: ಆತಂಕದಲ್ಲಿ ಗಾಬಿತಕೇಣಿ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಶಾಸಕಿ ರೂಪಾಲಿ ನಾಯ್ಕ, ಮುತುವರ್ಜಿ ವಹಿಸಿ ಮೇ 24ರಂದು ತಡೆಗೋಡೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇದೀಗ ಕಾಮಗಾರಿ ಮುಗಿದು ತಾತ್ಕಾಲಿಕ ಕಲ್ಲಿನ ತಡೆಗೋಡೆ ನಿರ್ಮಾಣವಾಗಿದೆ.