‘ನಾವು ಸ್ನೇಹಿತರು ಆಗಾಗ ನಿಸರ್ಗ ರಮಣೀಯ ಸ್ಥಳಗಳಿಗೆ ಭೇಟಿ ನೀಡುತ್ತೇವೆ. ಉದ್ಯೋಗದಿಂದ ಸ್ವಲ್ಪ ಸಮಯ ದೂರ ಉಳಿದು, ಮನಸ್ಸಿಗೆ ನಿರಾಳ ಮನೋಭಾವ ಅನುಭವಿಸುತ್ತಿದ್ದೆವು. ಆದರೆ, ನಾಲ್ಕು ತಿಂಗಳಿನಿಂದ ಉದ್ಯೋಗವೂ ಇಲ್ಲ, ಪ್ರವಾಸವೂ ಇಲ್ಲ ಎಂಬಂತಾಗಿತ್ತು. ಈಗ ಭಾನುವಾರವೂ ಲಾಕ್ಡೌನ್ ತೆರವು ಮಾಡಿರುವುದರಿಂದ ಮತ್ತೆ ಪ್ರವಾಸ ಹೋಗಬಹುದಾಗಿದೆ’ ಎಂದು ಹುಬ್ಬಳ್ಳಿಯ ಉದ್ಯಮಿ ಸಂಜೀವಕುಮಾರ ಭೂತೆ ಹೇಳಿದರು.