ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದೂಗಳಲ್ಲಿ ಸಂಘಟನೆ ಇಂದಿನ ಅಗತ್ಯ’

ರಾಮ ಮಂದಿರ ನಿರ್ಮಾಣ ಸಂಕಲ್ಪದೊಂದಿಗೆ ಸತ್ಯನಾರಾಯಣ ಪೂಜೆ
Last Updated 6 ಡಿಸೆಂಬರ್ 2018, 9:54 IST
ಅಕ್ಷರ ಗಾತ್ರ

ಶಿರಸಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಸಂಕಲ್ಪದೊಂದಿಗೆ ವಿಶ್ವ ಹಿಂದೂ ಪರಿಷತ್ ಸ್ಥಳೀಯ ಘಟಕದ ವತಿಯಿಂದ ಗುರುವಾರ ಇಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

25 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಪೂಜೆಯಲ್ಲಿ 108 ದಂಪತಿ ಭಾಗವಹಿಸಿದ್ದರು. ನಂತರ ಪಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘಟನೆಯ ರಾಜ್ಯ ಘಟಕದ ಸಂಚಾಲಕ ಸು.ಕೃಷ್ಣಮೂರ್ತಿ ಅವರು, ‘ಭಾರತದ ಮೇಲೆ ಆಕ್ರಮಣ ನಡೆಯುತ್ತಿರುವ ಗತಕಾಲದಿಂದ ಇಂದಿನವರೆಗೂ ಹಿಂದೂಗಳಲ್ಲಿ ಸಂಘಟನೆಯ ಕೊರತೆಯಿದೆ. ಇದಕ್ಕೆ ಮೊದಲ ಆದ್ಯತೆ ನೀಡಬೇಕು. ಸಾಮಾಜಿಕ ಸಾಮರಸ್ಯ ಕಾಪಾಡಲು ದೇವರು ಒಬ್ಬ ನಾಮ ಹಲವು ಎಂಬ ಮಾತನ್ನು ನಡೆಸಬೇಕಾಗಿದ್ದರೂ, ಭಾರತ ಹಿಂದೂ ರಾಷ್ಟ್ರ ಆಗಬೇಕು. ಹಿಂದೂಗಳು ಗೌರವಯುತವಾಗಿ ಜೀವಿಸಬೇಕು. ಜಾತಿ, ಸಮುದಾಯ ಬಿಟ್ಟು, ಹಿಂದೂವಾಗಿ ಬದುಕಬೇಕು’ ಎಂದು ಕರೆ ನೀಡಿದರು.

ಸಂಘಟನೆ ಪ್ರಮುಖ ಗಂಗಾಧರ ಹೆಗಡೆ ಮಾತನಾಡಿ, ‘ದೇಶದಲ್ಲಿ ರಾಮನಿಗೆ ಮಂದಿರ ಕಟ್ಟಲಾಗದಿದ್ದರೆ ಸಂಸ್ಕೃತಿ ಕಟ್ಟಲಾಗದು. ರಾಮ ಮತ್ತು ಭಾರತ ಬೇರೆ ಬೇರೆಯಲ್ಲ. ಹೀಗಾಗಿ ಎಂತಹ ಸಂದರ್ಭ ಬಂದರೂ ರಾಮ ಮಂದಿರ ನಿರ್ಮಾಣ ಮಾಡಬೇಕು. 490 ವರ್ಷಗಳ ಹಿಂದೆ ವಿಕ್ರಮಾದಿತ್ಯ ಮಹಾರಾಜ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ದ. ನಂತರ ಅದನ್ನು ಕೆಡವಿ ಬಾಬರಿ ಮಸೀದಿ ಕಟ್ಟಲಾಗಿತ್ತು. ಆದರೆ, ಹಿಂದೂಗಳ ಆರಾಧ್ಯ ಕ್ಷೇತ್ರವಾದ ಅಯೋಧ್ಯೆಯಲ್ಲಿ ಮಂದಿರದ ಹೊರತಾಗಿ ಮಸೀದಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ’ ಎಂದರು. ಪ್ರಮುಖರಾದ ವೆಂಕಟರಮಣ ಹೆಗಡೆ, ಗೋಪಾಲ ದೇವಾಡಿಗ, ಪ್ರಕಾಶ ಸಾಲೇರ, ವಿಠ್ಠಲ ಪೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT