‘ಭಾರಿ ಮಳೆಯಿಂದ ಶಿರ್ವೆಯ ಹಳ್ಳ ತುಂಬಿ ಹರಿಯುತ್ತಿದೆ. ಈಗ ಹಬ್ಬ ಹರಿದಿನಗಳು ಶುರುವಾಗುತ್ತಿದ್ದು, ಹಳ್ಳ ದಾಟಿ ಹೋಗಿ ದೇವರ ದರ್ಶನವನ್ನು ಪಡೆಯಲು ಬಹಳ ತೊಂದರೆಯಾಗುತ್ತಿದೆ. ಹಿರಿಯರು ಹಾಗೂ ಮಹಿಳೆಯರ ಕೈ ಹಿಡಿದು ಹಳ್ಳ ದಾಟಿಸಬೇಕಾಗುತ್ತದೆ’ ಎಂದು ಗ್ರಾಮಸ್ಥರಾದ ಘನಶ್ಯಾಮ ಗೌಡ, ಸಂತೋಷ ಗುನಗಿ, ಶ್ರೀಪಾದ ಗೌಡ, ರಾಮಾ ಗೌಡ, ತುಕ್ಕು ಗೌಡ ಅಳಲು ತೋಡಿಕೊಂಡಿದ್ದಾರೆ.