‘ಮಿಶ್ರಣ ಸಿಂಪಡಣೆ ಸೂಕ್ತ’:‘ಈಗ ಮಳೆ ಕಡಿಮೆಯಾಗಿದ್ದು, ಕೊಳೆ ರೋಗ ಕಾಣಿಸಿಕೊಂಡ ಅಡಿಕೆ ತೋಟದಲ್ಲಿ ಮದ್ದು ಹೊಡೆಯಲು ಅವಕಾಶವಿದೆ. ಆದ್ದರಿಂದ ಮುಂಜಾಗ್ರತೆಯ ದೃಷ್ಟಿಯಿಂದ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುವುದು ಉತ್ತಮ. ಇದರಿಂದ ಕೊಳೆ ರೋಗದ ನಿಯಂತ್ರಣ ಆಗುವುದರೊಂದಿಗೆ, ಈಗ ಕೊಳೆ ರೋಗ ತಗುಲಿರುವ ಅಡಿಕೆ ಮರಕ್ಕೆ ಬರುವ ವರ್ಷ ರೋಗ ತಗುಲದಂತೆ ತಡೆಯಲೂ ಕೂಡ ಸಹಕಾರಿಯಾಗುತ್ತದೆ’ ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಮಹಾಬಲೇಶ್ವರ.ಬಿ.ಎಸ್. ಸಲಹೆ ನೀಡಿದರು.