ಈ ಬಗ್ಗೆ ಪ್ರತಿಕ್ರಿಯಿಸಿದ ಸಾಹಿತಿ ಜಯಂತ ಕಾಯ್ಕಿಣಿ, ‘ಪ್ರಶಸ್ತಿ ಪ್ರಕಟವಾಗಿರುವುದು ತುಂಬ ಸಂತೋಷದ ವಿಷಯ. ಕನ್ನಡದ ಸಾಹಿತ್ಯದ ಭಾಷಾಂತರ ಕೃತಿಗೆ ಈ ಪ್ರಶಸ್ತಿ ಸಿಕ್ಕಿರುವುದು ನಾಡಿಗೆ ಹೆಮ್ಮೆಯ ವಿಷಯ. ಇದರಿಂದ ಇನ್ನೂ ಹೆಚ್ಚಿನ ಜನ ಈ ಪುಸ್ತಕ ಓದುವಂತಾಗುತ್ತದೆ. ಇಂಗ್ಲಿಷ್ಗೆ ಭಾಷಾಂತರಿಸಿದ ತೇಜಸ್ವಿನಿಯವರಿಗೆ ಅಭಿನಂದನೆ ಸಲ್ಲುತ್ತದೆ’ ಎಂದರು.