ಮುಂಡಗೋಡ: ತಾಲ್ಲೂಕಿನ ಬಾಚಣಕಿ ಸಮೀಪ ಕುರಿ ಮೇಯಿಸಲು ಹೋದ ಸಂದರ್ಭದಲ್ಲಿ ಕೆರೆಯ ಹತ್ತಿರ ಬಿದ್ದಿದ್ದ ಹೊಳಪಿನ ವಸ್ತುವನ್ನು ಕುತೂಹಲದಿಂದ ಮುಟ್ಟಿದಾಗ, ವಸ್ತು ಸ್ಫೋಟಗೊಂಡು ಕುರಿಗಾಹಿಯ ಎರಡು ಬೆರಳುಗಳಿಗೆ ಗಾಯವಾಗಿದೆ. ಮಜ್ಹಿಗೇರಿ ಗ್ರಾಮದ ಭರಮಣ್ಣ ಭೋವಿ(55) ಗಾಯಗೊಂಡು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.