<p><strong>ಕಾರವಾರ:</strong> ತಾಲ್ಲೂಕಿನ ವಿಠ್ಠಲ, ವಿಷ್ಣು ದೇವಾಲಯಗಳಲ್ಲಿ ಭಾನುವಾರ ಅದ್ದೂರಿಯಾಗಿ ಆಷಾಢ ಏಕಾದಶಿ ಆಚರಿಸಲಾಯಿತು. ಹಬ್ಬದ ಅಂಗವಾಗಿ ಅಖಂಡ ಭಜನೆ, ವಿಠ್ಠಲ ನಾಮಸ್ಮರಣೆ, ಪೂಜೆಗಳು ನಡೆದವು.</p>.<p>ಇಲ್ಲಿನ ಮಾಲಾದೇವಿ ಮೈದಾನದ ಸಮೀಪದಲ್ಲಿರುವ ವಿಠ್ಠಲ ರುಖುಮಾಯಿ ದೇವಸ್ಥಾನ, ರಾಧಾಕೃಷ್ಣ ದೇವಸ್ಥಾನ, ಸಿದ್ದರದ ನರಸಿಂಹ ದೇವಸ್ಥಾನ, ಅಸ್ನೋಟಿ ಸಮೀಪದ ಕೃಷ್ಣಾಪುರದಲ್ಲಿರುವ ವಿಠ್ಠಲ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.</p>.<p>ಆಷಾಢ ಏಕಾದಶಿ ಅಂಗವಾಗಿ ಕಾರವಾರ ಬೈಸಿಕಲ್ ಕ್ಲಬ್ ವತಿಯಿಂದ ಸೈಕ್ಲಿಂಗ್ ಮೂಲಕ ಮೆರವಣಿಗೆ ನಡೆಸಿದ ಸದಸ್ಯರು ವಿಠ್ಠಲನ ಭಜನೆ ಹಾಡುತ್ತ, ಅಲ್ಲಲ್ಲಿ ನರ್ತಿಸುತ್ತ ಸಾಗಿದರು. ಇಲ್ಲಿನ ವಿಠ್ಠಲ ರುಖುಮಾಯಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆರಂಭಗೊಂಡ ಸೈಕ್ಲಿಂಗ್ ಅಸ್ನೋಟಿಯ ಕೃಷ್ಣಾಪುರದವರೆಗೂ ಸಾಗಿತು.</p>.<p>ಸಿದ್ದರದ ನರಸಿಂಹ ದೇವಾಲಯದಲ್ಲಿ ನಸುಕಿನ ಜಾವದಿಂದ ಆರಂಭಗೊಂಡು ಸೋಮವಾರ ನಸುಕಿನ ಜಾವದವರೆಗೂ ನಿರಂತರ ಭಜನೆ ನಡೆದವು. ತಡರಾತ್ರಿವರೆಗೂ ವಿಠ್ಠಲ ದೇವಾಲಯಗಳಲ್ಲಿ ಪೂಜೆ ನಡೆದವು. ಏಕಾದಶಿ ಅಂಗವಾಗಿ ಉಪವಾಸ ವ್ರತ ಕೈಗೊಂಡಿದ್ದ ಭಕ್ತರು ಹರಕೆಗಳನ್ನು ಸಮರ್ಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ತಾಲ್ಲೂಕಿನ ವಿಠ್ಠಲ, ವಿಷ್ಣು ದೇವಾಲಯಗಳಲ್ಲಿ ಭಾನುವಾರ ಅದ್ದೂರಿಯಾಗಿ ಆಷಾಢ ಏಕಾದಶಿ ಆಚರಿಸಲಾಯಿತು. ಹಬ್ಬದ ಅಂಗವಾಗಿ ಅಖಂಡ ಭಜನೆ, ವಿಠ್ಠಲ ನಾಮಸ್ಮರಣೆ, ಪೂಜೆಗಳು ನಡೆದವು.</p>.<p>ಇಲ್ಲಿನ ಮಾಲಾದೇವಿ ಮೈದಾನದ ಸಮೀಪದಲ್ಲಿರುವ ವಿಠ್ಠಲ ರುಖುಮಾಯಿ ದೇವಸ್ಥಾನ, ರಾಧಾಕೃಷ್ಣ ದೇವಸ್ಥಾನ, ಸಿದ್ದರದ ನರಸಿಂಹ ದೇವಸ್ಥಾನ, ಅಸ್ನೋಟಿ ಸಮೀಪದ ಕೃಷ್ಣಾಪುರದಲ್ಲಿರುವ ವಿಠ್ಠಲ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.</p>.<p>ಆಷಾಢ ಏಕಾದಶಿ ಅಂಗವಾಗಿ ಕಾರವಾರ ಬೈಸಿಕಲ್ ಕ್ಲಬ್ ವತಿಯಿಂದ ಸೈಕ್ಲಿಂಗ್ ಮೂಲಕ ಮೆರವಣಿಗೆ ನಡೆಸಿದ ಸದಸ್ಯರು ವಿಠ್ಠಲನ ಭಜನೆ ಹಾಡುತ್ತ, ಅಲ್ಲಲ್ಲಿ ನರ್ತಿಸುತ್ತ ಸಾಗಿದರು. ಇಲ್ಲಿನ ವಿಠ್ಠಲ ರುಖುಮಾಯಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆರಂಭಗೊಂಡ ಸೈಕ್ಲಿಂಗ್ ಅಸ್ನೋಟಿಯ ಕೃಷ್ಣಾಪುರದವರೆಗೂ ಸಾಗಿತು.</p>.<p>ಸಿದ್ದರದ ನರಸಿಂಹ ದೇವಾಲಯದಲ್ಲಿ ನಸುಕಿನ ಜಾವದಿಂದ ಆರಂಭಗೊಂಡು ಸೋಮವಾರ ನಸುಕಿನ ಜಾವದವರೆಗೂ ನಿರಂತರ ಭಜನೆ ನಡೆದವು. ತಡರಾತ್ರಿವರೆಗೂ ವಿಠ್ಠಲ ದೇವಾಲಯಗಳಲ್ಲಿ ಪೂಜೆ ನಡೆದವು. ಏಕಾದಶಿ ಅಂಗವಾಗಿ ಉಪವಾಸ ವ್ರತ ಕೈಗೊಂಡಿದ್ದ ಭಕ್ತರು ಹರಕೆಗಳನ್ನು ಸಮರ್ಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>