ಈ ಪ್ರದೇಶಕ್ಕೆ ಸರ್ವಋತುವಿನಲ್ಲಿ ಭೇಟಿ ನೀಡಬಹುದಾಗಿದೆ. ತಂಪಾದ ವಾತಾವರಣ ವರ್ಷದ 24 ಘಂಟೆಯೂ ಬಸವನ ಬಾಯಿಯಿಂದ ಹರಿದು ಬರುವ ನೀರು, ಸುಂದರ ಪ್ರಕೃತಿ ಸೌಂದರ್ಯ ಪರಿಸರ ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಮಳೆಗಾಲದಲ್ಲಿ ಚಾರಣ ಮಾಡಲು ಈ ಪ್ರದೇಶ ಉತ್ತಮವಾಗಿದ್ದು, ಅಲ್ಲಿಂದ 1 ಕಿ.ಮೀ ದೂರ ಸಾಗಿದರೆ ಪುರಾಣ ಪ್ರಸಿದ್ಧ ಹೊಗೆವಡ್ಡಿ ದೇವಸ್ಥಾನ ಕೂಡ ಕಾಣಬಹುದಾಗಿದೆ.