ಪಟ್ಟಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಶಾಸಕ ಯತ್ನಾಳ ಅವರು ಯಾವ ಅರ್ಥದಲ್ಲಿ ಯಾವ ಮಾತು ಹೇಳುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಅವರ ಹೇಳಿಕೆಯ ಅರ್ಥ ಅವರಿಗೆ ಮಾತ್ರ ಗೊತ್ತು. ಗೋಕಾಕದಲ್ಲಿ ಒಂದು ಹೇಳಿಕೆ, ವಿಜಯಪುರದಲ್ಲಿ ಒಂದು ಹೇಳಿಕೆ, ಬೆಳಗಾವಿಯಲ್ಲಿ ಮತ್ತೊಂದು ಹೇಳಿಕೆ ನೀಡುತ್ತಾ ಹೋದರೆ, ಪಕ್ಷದ ನಾಯಕತ್ವಕ್ಕೆ ಮುಜುಗರ ಉಂಟು ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದರು.