ಸಾಹಿತ್ಯದ ಬಗ್ಗೆ ಇರುವ ಮಡಿವಂತಿಕೆ ಬಿಡಬೇಕು. ಸಾಹಿತ್ಯದ ವೇದಿಕೆಯಲ್ಲಿ ಎಲ್ಲ ರೀತಿಯ ಚರ್ಚೆಗಳು ನಡೆದು, ಸಮಾಜದ ಹೊಲಸು ಗುಡಿಸುವ ಕಾರ್ಯ ಆಗಬೇಕು ಎಂದು ಹೇಳಿದರು. ಪತ್ರಕರ್ತರಾದ ಕೆ. ಗಣೇಶ ಕೊಡೂರು, ಅಶೋಕ ಹಾಸ್ಯಗಾರ, ಸಾಹಿತಿ ಭಾಗೀರಥಿ ಹೆಗಡೆ ಮಾತನಾಡಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಜಯರಾಮ ಹೆಗಡೆ, ಸುಬ್ರಾಯ ಮತ್ತಿಹಳ್ಳಿ, ರಾಜು ಹೆಗಡೆ, ಸಿಂಧು ಹೆಗಡೆ,ಗಾಯತ್ರಿ ರಾಘವೇಂದ್ರ, ಡಾ. ಅಜಿತ್ ಹರೀಶಿ, ನಾಗಪತಿ ಮತ್ತಿಘಟ್ಟ, ಗಣೇಶ ಹೊಸ್ಮನೆ ಕವನ ವಾಚಿಸಿದರು. ಶೃತಿ ಭೋಡೆ ಹಾಡಿದರು.