‘ತಾಲ್ಲೂಕುವ್ಯಾಪ್ತಿಯಲ್ಲಿ ಬರುವ ದೂರವಾಣಿ ಕೇಂದ್ರಗಳಲ್ಲಿ 21 ಗುತ್ತಿಗೆ ಕಾರ್ಮಿಕರು ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರುತಿಂಗಳಿನಿಂದ ವೇತನಸಿಗದೇ ಜೀವನ ಮುನ್ನಡೆಸುವುದು ಕಷ್ಟವಾಗಿದೆ.ನಾವು ಕುಟುಂಬಸ್ಥರಾಗಿದ್ದು ನಮ್ಮನ್ನೇನಂಬಿ ಕುಟುಂಬ ನಡೆಯುತ್ತದೆ. ಪರಿಚಯಸ್ಥರಿಂದ ಸಾಲ ಪಡೆದು ಜೀವನ ನಡೆಸಬೇಕಾದ ಪರಿಸ್ಥಿತಿ ಉಂಟಾಗಿದೆ.ನಾವು ಈಗಾಗಲೇ ಮಾನಸಿಕವಾಗಿ ತುಂಬಾ ಕುಗ್ಗಿದ್ದೇವೆ. ಮೇಲಧಿಕಾರಿಗಳಿಗೆ ವಿನಂತಿಸಿಕೊಂಡರೂಯಾವುದೇ ಪ್ರಯೋಜನ ಆಗಿಲ್ಲ’ಎಂದು ಅಳಲು ತೋಡಿಕೊಂಡರು.