ಶಿರಸಿ–ಹುಬ್ಬಳ್ಳಿ ಹೆದ್ದಾರಿಗೆ ಹೊಂದಿಕೊಂಡಿರುವ ಸಸ್ಯ ಪಾಲನಾ ಕ್ಷೇತ್ರದಲ್ಲಿ ಸದ್ಯ ಒಣಗಿದ ಗಿಡಗಳು, ಮುರಿದ ಕಬ್ಬಿಣದ ಮಕ್ಕಳ ಆಟಿಕೆಗಳು, ಶಿಥಿಲಗೊಂಡಿರುವ ಕುಟೀರಗಳು ಕಾಣಸಿಗುತ್ತಿವೆ. ಐದು ಎಕರೆಗೂ ಹೆಚ್ಚು ವಿಸ್ತಾರದ ಜಾಗದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಕಚೇರಿ ಹೊರತಾಗಿ ಉಪಯುಕ್ತ ಸೌಲಭ್ಯ ಕಾಣುತ್ತಿಲ್ಲ.