ಶಿರಸಿ: ನಗರದ ಹೃದಯಭಾಗದಲ್ಲಿರುವ ದೇವಿಕೆರೆಯನ್ನು ಯೂತ್ ಫಾರ್ ಸೇವಾ ಸಂಸ್ಥೆಯ ಕಾರ್ಯಕರ್ತರು ಸ್ವಚ್ಛಗೊಳಿಸಿದ್ದು, ಸುಮಾರು 2 ಕ್ವಿಂಟಲ್ನಷ್ಟು ತ್ಯಾಜ್ಯವನ್ನು ಹೊರಕ್ಕೆ ತೆಗೆದರು.
ಸಂಸ್ಥೆಯ ಪರಿಸರ ವಿಭಾಗದ ಸಂಚಾಲಕ ಉಮಾಪತಿ ಭಟ್ ಕೆ.ವಿ.ಮುಂದಾಳತ್ವದಲ್ಲಿ ಸ್ವಯಂ ಸೇವಾ ಕಾರ್ಯಕರ್ತರಾಗಿರುವ ಅರಣ್ಯ ಕಾಲೇಜಿನ 12 ವಿದ್ಯಾರ್ಥಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಕೆರೆಯಲ್ಲಿ ತೇಲಾಡುತ್ತಿದ್ದ ಪ್ಲಾಸ್ಟಿಕ್ ಬಾಟಲಿ, ಬ್ಯಾಗ್, ಇನ್ನಿತರ ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಕೆರೆ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ತೆರವು ಮಾಡಿದರು. ಕಾರ್ಯಾಚರಣೆ ವೇಳೆ ಸುಮಾರು 60 ಕೆಜಿಯಷ್ಟು ಪ್ಲಾಸ್ಟಿಕ್ ತ್ಯಾಜ್ಯ ಹೊರತೆಗೆದಿದ್ದಾಗಿ ಕಾರ್ಯಕರ್ತರು ತಿಳಿಸಿದರು.